ಹುಬ್ಬಳ್ಳಿ : ಒಂದೇ ದಿನ ಐವರು ಕೋವಿಡ್ ಸೋಂಕಿತರು ಸಾವು
ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಒಂದೇ ದಿನ ಐವರು ಕೋವಿಡ್ ಸೋಂಕಿತರು ನಿಧನರಾಗಿದ್ದಾರೆ. ಇವರೆಲ್ಲರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದ್ದು, ಮಧ್ಯಾಹ್ನ 3.45 ರಿಂದ 5 ಗಂಟೆಯವೊಳಗೆ ನಿಧನ ಹೊಂದಿದ್ದಾರೆ. ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣ ಎಂಬುದು ಮೃತರ ಕುಟುಂಬದವರ ಆರೋಪವಾಗಿದೆ.
ಆದರೆ ಇದನ್ನು ನಿರಾಕರಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಮೃತರಲ್ಲಿ ಕೆಲವರು ತೀವ್ರತರವಾದ ರೋಗಗಳಿಂದ ನರಳುತ್ತಿದ್ದರು. ಕೆಲವರಿಗೆ ವಯಸ್ಸಾಗಿತ್ತು. ಹೀಗಾಗಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದರು.
ಮೃತರ ವಿವರ
ವಾಣಿ ಜನ್ನು (51) ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ.
ವಿನಯಾ ನಾಯಕ (47) ಶಿರಸಿ ನಿವಾಸಿ.
ಬಾಲಚಂದ್ರ ಡಿ. (61) ಹುಬ್ಬಳ್ಳಿಯ ನಿವಾಸಿ.
ದೇಸಾಯಿಗೌಡ ಪಾಟೀಲ (59)ಮಾಜಿ ಜಿಪಂ ಹಾಗೂ ಪಾಲಿಕೆ ಸದಸ್ಯ.
ಸುಶಾಂತ ದ್ರೋಣಾವತ (39) ಹುಬ್ಬಳ್ಳಿಯ ನಿವಾಸಿ.