ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ : ಪ್ರೀತಮ್ ಗೌಡ
ಹಾಸನ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ, ನಾನು ಹುಟ್ಟಿನಿಂದಲೇ ಬಿಜೆಪಿಯಲ್ಲಿದೇನೆ, ಮತ್ತು ಸಾಯುವವರೆಗು ಬಿಜೆಪಿಯಲ್ಲಿ ಇರುತ್ತೇನೆ ಎಂದು ಬಿಜೆಪಿ ಶಾಸಕ ಪ್ರೀತಮ್ ಜೆ ಗೌಡ ಹೇಳಿದ್ದಾರೆ.
ಶಾಸಕ ಪ್ರೀತಮ್ ಜೆ ಗೌಡ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತ ವಂದತಿ ಹರದಾಡುತ್ತಿದ್ದು, ನಿನ್ನೆ ಸೋಮವಾರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಂ ಜನರಿಗೆ ಸಹಾಯ ಮಾಡಿರುವುದು ಮತ್ತು ಮಾಡುತ್ತಿರುವುದು ಕಂಡು ಕಾಂಗ್ರೆಸ್ ಸೇರಲು ನಾನು ಇದನ್ನೆಲ್ಲ ಮಾಡುತ್ತಿದ್ದೇನೆ ಅಂತ ಆಡಿಕೊಳ್ಳುತ್ತಿದ್ದಾರೆ. ಆದರೆ ಅಂಥದ್ದೇನೂ ಇಲ್ಲ. ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ವಂದತಿಗಳಿಗೆ ತೆರೆ ಎಳೆದಿದ್ದಾರೆ.
ಅಲ್ಲದೇ ನಾನು ನೇರವಾಗಿ ಮಾತಾಡುವುದು ನನ್ನ ಸ್ವಭಾವ, ನನಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಜನರಿಂದ ಮತ ಗಿಟ್ಟಿಸಲು ನಾನು ಯಾವುದನ್ನೂ ಮಾಡುವುದಿಲ್ಲ. ನಾನು ಜನರಿಗೆ ಹೇಳುವುದಿಷ್ಟೇ. ನಾನು ಕೆಲಸ ಮಾಡಿದ್ದೇನೆ ಅಂತ ಅನಿಸಿದರೆ ಅಂದರೆ ಮಾತ್ರ ವೋಟು ಕೊಡಿ. ಇಲ್ಲ ಶಾಸಕರೇ ನಿಮ್ಮ ಕೆಲಸ ತೃಪ್ತಿದಾಯಕವಾಗಿಲ್ಲ ಅಂತ ನಿಮಗನಿಸಿದರೆ ಜೆಡಿ(ಎಸ್) ಇಲ್ಲವೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆಂಬಲ ನೀಡಿ, ನಾನು ಖಂಡಿತ ಬೇಜಾರು ಮಾಡಿಕೊಳ್ಳಲ್ಲ ಎಂದು ಪ್ರೀತಮ್ ಗೌಡ ಹೇಳಿದರು.