ತಪ್ಪಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೆ ಹಿಂಪಡೆಯುವುದು ಹೇಗೆ?
ಪ್ರಸ್ತುತ ಆನ್ಲೈನ್ ಯುಗದಲ್ಲಿ ಎಲ್ಲವೂ ಆನ್ಲೈನ್ ಆಗಿದೆ. ಕೊರೋನಾದ ಕಾರಣದಿಂದಾಗಿ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಬಳಕೆ ಬಹಳಷ್ಟು ಹೆಚ್ಚಾಗಿದೆ.
ಇದರಿಂದಾಗಿ ಇಂದು ಮನೆಯಲ್ಲಿ ಕುಳಿತು, ನಾವು ಬಯಸಿದವರಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಆದರೆ ಈ ವೈಶಿಷ್ಟ್ಯವು ಎಷ್ಟು ಸುಲಭವೋ ಅಷ್ಟೇ ಅಪಾಯಕಾರಿ. ಕೆಲವೊಮ್ಮೆ ಹಣವನ್ನು ತಪ್ಪಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತಹ ಅನೇಕ ಪ್ರಕರಣಗಳು ಕೂಡ ನಡೆದಿವೆ.
ವಾಸ್ತವವಾಗಿ, ಖಾತೆಯ ಸಂಖ್ಯೆಯನ್ನು ಅವಸರದಲ್ಲಿ ನಮೂದಿಸುವಾಗ ಹಲವು ಬಾರಿ ತಪ್ಪು ಸಂಭವಿಸುತ್ತದೆ. ಇದರಿಂದಾಗಿ ನಾವು ಕಷ್ಟಪಟ್ಟು ಸಂಪಾದಿಸಿದ ಹಣವು ಅಪರಿಚಿತ ವ್ಯಕ್ತಿಯ ಖಾತೆಯನ್ನು ತಲುಪುತ್ತದೆ. ಆದರೆ ನಾವು ತಪ್ಪು ಖಾತೆಗೆ ಹಣವನ್ನು ಕಳುಹಿಸಿದರೂ ಸಹ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ. ಇಂದು ಈ ವಿಧಾನ ಯಾವುದು ಎಂದು ತಿಳಿಯೋಣ:
ಹಣವನ್ನು ಈ ರೀತಿ ಹಿಂದಿರುಗಿಸಬಹುದು
ನೀವು ಆಕಸ್ಮಿಕವಾಗಿ ಇನ್ನೊಬ್ಬರ ಖಾತೆಗೆ ಹಣವನ್ನು ಕಳುಹಿಸಿದರೆ, ತಕ್ಷಣ ನಿಮ್ಮ ಬ್ಯಾಂಕ್ ಗೆ ಫೋನ್ ಅಥವಾ ಇಮೇಲ್ ಮೂಲಕ ತಿಳಿಸಬೇಕು. ನಿಮ್ಮ ಮಾಹಿತಿಯ ಆಧಾರದ ಮೇಲೆ, ಯಾರ ಬ್ಯಾಂಕ್ ಖಾತೆಗೆ ಹಣವನ್ನು ತಪ್ಪಾಗಿ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್ ಗೆ ತಿಳಿಯುತ್ತದೆ. ಇದರಿಂದ ತಪ್ಪಾಗಿ ವರ್ಗಾವಣೆಗೊಂಡ ಹಣವನ್ನು ಹಿಂದಿರುಗಿಸಲು ಬ್ಯಾಂಕ್ ಆ ವ್ಯಕ್ತಿಯ ಅನುಮತಿ ಕೇಳಬಹುದು.
ಅದೇ ಸಮಯದಲ್ಲಿ ಆರ್ಬಿಐನ ಮಾರ್ಗಸೂಚಿಗಳ ಪ್ರಕಾರ ಹಣವನ್ನು ಬೇರೊಬ್ಬರ ಖಾತೆಗೆ ತಪ್ಪಾಗಿ ಜಮಾ ಮಾಡಿದರೆ, ನಿಮ್ಮ ಬ್ಯಾಂಕ್ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ತಪ್ಪಾದ ಖಾತೆಯಿಂದ ಹಣವನ್ನು ಸರಿಯಾದ ಖಾತೆಗೆ ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿಯು ಒಪ್ಪಿದರೆ, ಹಣವನ್ನು 7 ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.
ನಿಮ್ಮ ಹಣವನ್ನು ಮರಳಿ ಪಡೆಯಲು ಮತ್ತೊಂದು ಕಾನೂನು ಮಾರ್ಗವಿದೆ. ಯಾರ ಖಾತೆಯಲ್ಲಿ ಹಣವನ್ನು ತಪ್ಪಾಗಿ ವರ್ಗಾಯಿಸಲಾಗಿದೆಯೋ, ಅವರು ಅದನ್ನು ಹಿಂದಿರುಗಿಸಲು ನಿರಾಕರಿಸಿದರೆ, ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಹಣವನ್ನು ಮರುಪಾವತಿಸದಿದ್ದಲ್ಲಿ, ಈ ಹಕ್ಕು ಆರ್ಬಿಐ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಬರುತ್ತದೆ.
ಆನ್ಲೈನ್ನಲ್ಲಿ ಹಣವನ್ನು ವರ್ಗಾಯಿಸುವಾಗ ಈ ವಿಷಯಗಳನ್ನು ನೆನಪಿಡಿ
ಖಾತೆಯ ಸಂಖ್ಯೆಯನ್ನು ತಪ್ಪಾಗಿ ನಮೂದಿಸುವುದರಿಂದ ಅನಾವಶ್ಯಕವಾಗಿ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ, ಹಣವನ್ನು ವರ್ಗಾವಣೆ ಮಾಡುವಾಗ, ವಿವರಗಳನ್ನು ನಮೂದಿಸಿದ ಬಳಿಕ ಅದನ್ನು ಮತ್ತೆ ಪರಿಶೀಲಿಸಿ. ದೊಡ್ಡ ಮೊತ್ತವನ್ನು ವರ್ಗಾಯಿಸುವ ಮೊದಲು ಸಣ್ಣ ಮೊತ್ತವನ್ನು ವರ್ಗಾಯಿಸಿ ಮತ್ತು ಅದು ಸರಿಯಾದ ಖಾತೆಗೆ ಹೋಗುತ್ತಿದೆಯೇ ಎಂದು ಪರಿಶೀಲಿಸುವುದು ಉತ್ತಮ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಸಮಯದಲ್ಲಿ ಅಮೃತ ಬಳ್ಳಿ ಕಷಾಯದ ಆರೋಗ್ಯ ಪ್ರಯೋಜನಗಳು#Saakshatv #healthtips #Giloy https://t.co/z4DsWOV94S
— Saaksha TV (@SaakshaTv) June 11, 2021
ಸೋಯಾ ಚಂಕ್ಸ್ ಮಂಚೂರಿ#soyaChuck #Manchurian https://t.co/Hhd2pyUlPt
— Saaksha TV (@SaakshaTv) June 11, 2021
ಇಂದಿನ ಸಮಯದಲ್ಲಿ ಮನೆಯಲ್ಲಿರಬೇಕಾದ 5 ವೈದ್ಯಕೀಯ ಸಾಧನಗಳು#medicaldevices https://t.co/t31elkxMq4
— Saaksha TV (@SaakshaTv) June 11, 2021
ರೈಲ್ವೆ ಪ್ರಯಾಣಿಕರ ಗಮನಕ್ಕೆ – ರೈಲ್ವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಳೆ ನಿಯಮ ಬದಲಾವಣೆ ಸಾಧ್ಯತೆ#Trainpassenger https://t.co/8l8UsNRUJ7
— Saaksha TV (@SaakshaTv) June 11, 2021
#bankaccount