ಪುಲ್ವಾಮಾದಲ್ಲಿ ಗುಂಡಿನ ಕಾಳಗ : ವಿಜಯಪುರದ ಯೋಧ ಹುತಾತ್ಮ
ವಿಜಯಪುರ : ಪುಲ್ವಾಮದಲ್ಲಿ ನಡೆದ ಉಗ್ರರು ಮತ್ತು ಭಾರತೀಯ ಸೇನೆ ನಡುವಿನ ಗುಂಡಿನ ಕಾಳಗದಲ್ಲಿ ವಿಜಯಪುರ ಮೂಲದ ಯೋಧ ಕಾಶೀರಾಯ್ ಬೊಮ್ಮನಹಳ್ಳಿ ಹುತಾತ್ಮರಾಗಿದ್ದಾರೆ.
ಕಾಶೀರಾಯ್ ಬಸವಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಸ್ಥರಾಗಿದ್ದಾರೆ.
ನಾಳೆ ಹುತಾತ್ಮ ಯೋಧ ಕಾಶೀರಾಯ್ ಪಾರ್ಥಿವ ಶರೀರ ತಲುಪುವ ನಿರೀಕ್ಷೆಗಳಿವೆ. ವಿಷಯ ತಿಳಿಯುತ್ತಲೇ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.
ಗ್ರಾಮದಲ್ಲಿಯೇ ಸರ್ಕಾರಿ ಸಕಲ ಗೌರವಗಳೊಂದಿಗೆ ನಡೆಯಲಿರುವ ಹುತಾತ್ಮ ಯೋಧನ ಅಂತ್ಯಕ್ರಿಯೆ ನಡೆಯಲಿದೆ.