ಆತ್ಮನಿರ್ಭಾರ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 26
ಹೊಸದಿಲ್ಲಿ, ಜುಲೈ 18: ದೇಶಾದ್ಯಂತದ ಸ್ಟಾರ್ಟ್ ಅಪ್ಗಳು ಮತ್ತು ತಾಂತ್ರಿಕ ಉದ್ಯಮಿಗಳ ಅಪಾರ ಆಸಕ್ತಿಯನ್ನು ಅನುಸರಿಸಿ ಆತ್ಮನಿರ್ಭಾರ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅಡಿಯಲ್ಲಿ ಅರ್ಜಿ ಗಳನ್ನು ಸಲ್ಲಿಸಲು ಸರ್ಕಾರ ಕೊನೆಯ ದಿನಾಂಕವನ್ನು ಜುಲೈ 26 ರವರೆಗೆ ವಿಸ್ತರಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಿದೇಶಿ ಆ್ಯಪ್ಗಳ ಅವಲಂಬನೆಯನ್ನು ಕಡಿಮೆ ಮಾಡಲು ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿರುವ ಈ ಸ್ಪರ್ಧೆಯಲ್ಲಿ ಭಾರತೀಯ ಘಟಕಗಳಿಂದ ವಿವಿಧ ವಿಭಾಗಗಳ ಅಡಿಯಲ್ಲಿ 2,353 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಗೆ ಬಂದಿರುವ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ನೀಡಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 26, 2020 ಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಸವಾಲನ್ನು ಮೈಗೋವ್ನ ಇನ್ನೋವೇಟ್ ಪೋರ್ಟಲ್ನಲ್ಲಿ ಆಯೋಜಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೇಳಿಕೆ ನೀಡಿದೆ. ಈ ಮೊದಲು, ನಮೂದುಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 18 ಆಗಿತ್ತು.
ಎಂಟು ವಿಭಾಗಗಳಿರುವ ಈ ಸ್ಪರ್ಧೆಯಲ್ಲಿ ಆರೋಗ್ಯ ಮತ್ತು ಕ್ಷೇಮ ವಿಭಾಗದಲ್ಲಿ 286 ಆ್ಯಪ್ ನಮೂದುಗಳು, ಇ-ಲರ್ನಿಂಗ್ ನಲ್ಲಿ 339 , ಸೋಷಿಯಲ್ ನೆಟ್ವರ್ಕಿಂಗ್ ನಲ್ಲಿ 414 ಅಪ್ಲಿಕೇಶನ್ಗಳು, ಆಟಗಳ ಅಡಿಯಲ್ಲಿ 136, ಕಚೇರಿ ಮತ್ತು ಹೋಮ್ ಅಪ್ಲಿಕೇಶನ್ ಅಡಿಯಲ್ಲಿ 238, ಸುದ್ದಿ ಅಡಿಯಲ್ಲಿ 75, ಮತ್ತು ಮನರಂಜನಾ ವಿಭಾಗದ ಅಡಿಯಲ್ಲಿ 96 ಮತ್ತು ‘ಇತರರು’ ವಿಭಾಗದ ಅಡಿಯಲ್ಲಿ ಸುಮಾರು 389 ಅಪ್ಲಿಕೇಶನ್ ನಮೂದುಗಳನ್ನು ಸಲ್ಲಿಸಲಾಗಿದೆ.
ವೈಯಕ್ತಿಕ ವಿಭಾಗದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಸುಮಾರು 788 ಅರ್ಜಿಗಳು ಬಳಕೆಗೆ ಸಿದ್ಧವಾಗಿವೆ ಮತ್ತು ಉಳಿದ 708 ಅರ್ಜಿಗಳು ಅಭಿವೃದ್ಧಿಯಲ್ಲಿವೆ. ಸಂಸ್ಥೆಗಳು ಸಲ್ಲಿಸಿದ ಅಪ್ಲಿಕೇಶನ್ ನಲ್ಲಿ 636 ಅನ್ನು ಈಗಾಗಲೇ ನಿಯೋಜಿಸಲಾಗಿದೆ ಮತ್ತು ಉಳಿದ 221 ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಿಕೆ ತಿಳಿಸಿದೆ.
ಅರ್ಜಿಗಳು ದೂರದ ಮತ್ತು ಸಣ್ಣ ಪಟ್ಟಣಗಳು ಸೇರಿದಂತೆ ದೇಶದ ಎಲ್ಲೆಡೆಯಿಂದ ಬಂದಿವೆ ಎಂದು ಹೇಳಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಇದು ನಮ್ಮ ದೇಶದಲ್ಲಿ ಇರುವ ಪ್ರತಿಭೆಯನ್ನು ತೋರಿಸುತ್ತದೆ, ಮತ್ತು ಈ ಆಪ್ ಇನ್ನೋವೇಶನ್ ಚಾಲೆಂಜ್ ಭಾರತೀಯ ಟೆಕ್ ಡೆವಲಪರ್ಗಳು, ಉದ್ಯಮಿಗಳು ಮತ್ತು ಕಂಪೆನಿಗಳಿಗೆ ಒಳ್ಳೆಯ ಅವಕಾಶವಾಗಿದೆ ಎಂದರು.
ಪ್ರತಿ ವಿಭಾಗದ ಅಡಿಯಲ್ಲಿ ಅಗ್ರ-ಮೂರು ವಿಜೇತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ 20 ಲಕ್ಷ, 15 ಲಕ್ಷ, ಮತ್ತು 10 ಲಕ್ಷ ರೂ.ಬಹುಮಾನ ನೀಡಲಾಗುವುದು.
ಬಳಸಲು ಸುಲಭವಾದ ಇಂಟರ್ಫೇಸ್ನೊಂದಿಗೆ, ಸ್ಕೇಲೆಬಲ್ ಮತ್ತು ಸುರಕ್ಷಿತವಾದ ಅಪ್ಲಿಕೇಶನ್ಗಳನ್ನು ಗುರುತಿಸುವುದು ಮತ್ತು ಬಳಕೆದಾರರಿಗೆ ಅಪ್ಲಿಕೇಶನ್ ಗೆ ಹಿಂತಿರುಗುವಂತೆ ಮಾಡುವ ಅನುಭವವನ್ನು ನೀಡುವುದು ನಿಜವಾದ ಸವಾಲಾಗಿದೆ. ಆತ್ಮನಿರ್ಭರ್ ಭಾರತ್ ಅಪ್ಲಿಕೇಶನ್ ವ್ಯವಸ್ಥೆಯು, ಭಾರತೀಯ ಟೆಕ್ ಸ್ಟಾರ್ಟ್ಅಪ್ ಗಳಿಗೆ ಮೌಲ್ಯವನ್ನು ಅನ್ಲಾಕ್ ಮಾಡಲು ಮತ್ತು ಬಹು-ಟ್ರಿಲಿಯನ್-ಡಾಲರ್ ಅಪ್ಲಿಕೇಶನ್ ಆರ್ಥಿಕತೆಯನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ