ಐಪಿಎಲ್ : ರಾಯಲ್ಸ್ ಮೇಲೆ ರೈಡ್ ಮಾಡುತ್ತಾ ಕೊಲ್ಕತ್ತಾ..?
ಐಪಿಎಲ್ ನ 18 ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಎರಡು ತಂಡಗಳು ಇದುವರೆಗೂ ನಾಲ್ಕು ಪಂದ್ಯಗಳನ್ನಾಡಿದ್ದು, ಒಂದು ಪಂದ್ಯ ಗೆದ್ದು ಮೂರು ಪಂದ್ಯಗಳನ್ನ ಸೋತಿವೆ.
ಹೆಡ್ ಟು ಹೆಡ್
ಐಪಿಎಲ್ ಈ ಎರಡೂ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಕೆಕೆಆರ್ ತಂಡ 12 ಬಾರಿ ವಿನ್ ಆಗಿದ್ದರೇ 10 ರಾಜಸ್ಥಾನ್ ತಂಡ ಗೆಲುವು ಸಾಧಿಸಿದೆ.
ಆದ್ರೆ ಕಳೆದ ಆರು ಪಂದ್ಯಗಳಲ್ಲಿ ಕೆಕೆಆರ್ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಕಳೆದ ಬಾರಿ ಐಪಿಎಲ್ ನಲ್ಲಿ ಎರಡೂ ಮ್ಯಾಚ್ ಗಳನ್ನ ಕೆಕೆಆರ್ ಗೆದ್ದುಕೊಂಡಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ನಮಗೆರಿಲ್ಲಗೂ ತಿಳಿದಿರುವಂತೆ ಮುಂಬೈನಲ್ಲಿ ರನ್ ಮಳೆಯೇ ಸುರಿಯುತ್ತಿದೆ. ಮೊದರ್ಲಾಧದಲ್ಲಿ ಬೌಲರ್ ಗಳಿಗೆ ಸ್ವಲ್ಪ ಅನುಕೂಲವಾದ್ರೂ, ಸೆಕೆಂಡ್ ಬೌಲ್ ಮಾಡೋರಿಗೆ ಕಷ್ಟ ಆಗಲಿದೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಂಜು ಬೀಳುವುದರಿಂದ ಬೌಲರ್ ಗಳಿಗೆ ಸ್ವಲ್ಪ ತೊಂದರೇ ಆಗಲಿದೆ. ಇದು ಬ್ಯಾಟ್ಸ್ ಮೆನ್ ಗಳಿಗೆ ಅನುಕೂಲಕರವಾಗಿರುತ್ತದೆ. ಯಾರೆ ಟಾಸ್ ವಿನ್ ಆದ್ರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಬಲಾಬಲಗಳೇನು..?
ಇದುವರೆಗೂ ಈ ಎರಡು ತಂಡಗಳು ತಲಾ ನಾಲ್ಕು ಮ್ಯಾಚ್ ಗಳನ್ನ ಆಡಿದ್ದು, ಇವುಗಳನ್ನ ಗಮನದಲ್ಲಿಟ್ಟುಕೊಂಡು ನೋಡುವುದಾದ್ರೆ ಎರಡು ತಂಡಗಳಲ್ಲಿ ಸಮಸ್ಯೆಗಳಿಗೆ ಇವೆ. ಮುಖ್ಯವಾಗಿ ಆರ್ ಆರ್ ತಂಡಕ್ಕೆ ಬ್ಯಾಟಿಂಗ್ ಬೌಲಿಂಗ್ ಎರಡಲ್ಲೂ ಪ್ಲಾಬಂಗಳಿವೆ. ಬ್ಯಾಟಿಂಗ್ ನಲ್ಲಿ ಮೊದಲು ಮಿಂಚಿದ ಸಂಜು ಈಗ ಸೈಲೆಂಟ್ ಆಗಿದ್ದಾರೆ. ಮನನ್ ವೋಹ್ರಾ ಒಳ್ಳೆ ಟಚ್ ನಲ್ಲಿ ಕಾಣ್ತಿಲ್ಲ. ಬಟ್ಲರ್ ಬ್ಲಾಸ್ಟ್ ಆಗುತ್ತಿಲ್ಲ. ಕಳೆದ ಪಂದ್ಯದಲ್ಲಿ ಶಿವಂ ದುಬೆ. ತೆವಾಟಿವಾ ಫಾರ್ಮ್ ಬಂದಿರೋದು ಸ್ವಲ್ಪ ಸಮಾಧಾನ ತಂದಿದೆ ಅಷ್ಟೆ. ಇನ್ನು ಬೌಲಿಂಗ್ ನಲ್ಲೂ ಅದೇ ಸಮಸ್ಯೆ ಕಾಣುತ್ತಿದೆ. ತಂಡದಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಇಲ್ಲದಿರುವುದು ತಂಡಕ್ಕೆ ಸೆಟ್ ಬ್ಯಾಕ್ ಆಗಿದೆ.
ಕೆಕೆಆರ್ ತಂಡಕ್ಕೂ ಇದೇ ಸಮಸ್ಯೆ ಇದೆ. ಆದ್ರೆ ಕಳೆದ ಪಂದ್ಯದಲ್ಲಿ ರಸಲ್, ದಿನೇಶ್ ಕಾರ್ತಿಕ್ ಮಿಂಚಿದ್ದು, ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದು ಬಿಟ್ಟರೇ ರಾಜಸ್ಥಾನಕ್ಕೆ ಹೋಲಿಕೆ ಮಾಡಿಕೊಂಡರೇ ಕೆಕೆಆರ್ ತಂಡದ ಬೌಲಿಂಗ್ ಚೆನ್ನಾಗಿದೆ.
ಲೈಕ್ಲಿ ಎಲೆವೆನ್
ರಾಜಸ್ತಾನ ತಂಡದಲ್ಲಿ ಒಂದು ಬದಲಾವಣೆಯನ್ನ ನಿರೀಕ್ಷೆ ಮಾಡಬಹುದು. ಮನನ್ ವೋಹ್ರಾ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನ ಆಡಿಸಬಹುದು. ಇನ್ನುಳಿದಂತೆ ಜೋಸ್ ಬಟ್ಲರ್, ಜೈಸ್ವಾಲ್, ಸ್ಯಾಮ್ಸನ್, ದೇವಿಡ್ ಮಿಲ್ಲರ್, ರಿಯಾನ್ ಪರಾಗ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಮುಸ್ತಫಿಜುರ್, ಸರಕಾರಿಯಾ.
ಇನ್ನ ಕೆಕೆಆರ್ ತಂಡದ ವಿಚಾರಕ್ಕೆ ಬಂದ್ರೆ ಇಲ್ಲೂ ಒಂದು ಬದಲಾವಣೆಯನ್ನ ನಿರೀಕ್ಷೆ ಮಾಡಬಹುದು. ನಾಗರಕೋಟಿ ಬದಲಾಗಿ ಶಿವಂ ಮಾವಿ ಅವರನ್ನ ಆಡಿಸುವ ಸಾಧ್ಯತೆಗಳಿವೆ. ಇನ್ನುಳಿದಂತೆ ಶುಭ್ ಮನ್ ಗಿಲ್, ರಾಹುಲ್ ತ್ರಿಪಾಟಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ರಸೆಲ್, ಸುನೀಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಪ್ರಸಿದ್ಧ ಕೃಷ್ಣ, ವರುಣ್ ಚಕ್ರವರ್ತಿ ಎಂದಿನಂತೆ ತಂಡದಲ್ಲಿರುತ್ತಾರೆ.
ವಿನ್ನಿಂಗ್ ಚಾನ್ಸ್
ಆನ್ ಪೇಪರ್ ಟೀಂಗಳನ್ನ ನೋಡಿದ್ರೆ ಕೆಕೆಆರ್ ತಂಡ ಗೆಲ್ಲುವ ಫೇವರೇಟ್ ಅಂತಾ ಹೇಳಬಹುದು. ಆದ್ರೆ ಸ್ಯಾಮ್ಸನ್, ಬಟ್ಲರ್ ಬ್ಲಾಸ್ಟ್ ಆದ್ರೆ ಆರ್ ಆರ್ ಗೆಲುವು ಸಾಧಿಸಬಹುದು.