ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ : ಜಗ್ಗೇಶ್ jaggesh
ಬೆಂಗಳೂರು : ನಟ ಕೋಮಲ್ ಗೆ ಕೊರೊನಾ ಸೋಂಕು ದೃಢಪಟ್ಟಾಗ ಕೊರೊನಾ ಸಂಕಷ್ಟಕ್ಕೆ ಮನೆಯಲ್ಲಿ ಒಬ್ಬರು ಸಿಲುಕಿದರೆ ಮನೆ ಮಂದಿಯೆಲ್ಲಾ ನರಕ ನೋಡುವಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್ ಬರೆದುಕೊಂಡಿದ್ದರು. ಇದೀಗ ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೋಮಲ್ ಬಳಿಕ ಜಗ್ಗೇಶ್ ಅವರ ಬಾವಮೈದುನನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನಿಗೆ ಬೆಡ್ ದೊರಕಿಸಲು ಹರಸಾಹನ ಪಟ್ಟ ಜಗ್ಗೇಶ್ ಈ ಕುರಿತಾದ ಅನುಭವವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜಗ್ಗೇಶ್ ತಮ್ಮ ಟ್ವೀಟ್ ನಲ್ಲಿ, ” 23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿ ಸಾಕಪ್ಪಾ ದೇವರೇ.. ಎನ್ನುವಷ್ಟರಲ್ಲಿ ನನ್ನ ಬಾವಮೈದುನ ಸೀರಿಯಸ್ ಆದ ಸುದ್ದಿ ಬಂತು.
ರಾತ್ರಿ 11ಕ್ಕೆ.! ಸರಿ ರಾತ್ರಿ ಅವನ ಕ್ಷೇಮದ ಜಾಗಕ್ಕೆ ಓಡಾಟ. ರಾಯರ ದಯೇ.. ನಾರಾಯಣ ಆಸ್ಪತ್ರೆಯಲ್ಲಿ ಕರುಣೆ ತೋರಿದರು. ಧನ್ಯವಾದ. ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ಬರೆದುಕೊಂಡಿದ್ದಾರೆ.