ಜಹಾಂಗೀರ್ಪುರಿ ಹಿಂಸಾಚಾರ – ಅಕ್ರಮ ಕಟ್ಟಡ ನೆಲಸಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎನ್ಡಿಎಂಸಿ) ಜಹಾಂಗೀರ್ಪುರಿಯಲ್ಲಿ ಅಕ್ರಮ ಕಟ್ಟಡಗಳನ್ನ ನೆಲಸಮ ಮಾಡಲು ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನಾಳೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಎಂಸಿಡಿಗೆ ಕೇಳಿದೆ. ಇದೀಗ ಅತಿಕ್ರಮಣ ತೆರವು ವಿರೋಧಿಸಿ ಸಲ್ಲಿಸಿರುವ ಅರ್ಜಿ ನಾಳೆ ಅಂದರೆ ಗುರುವಾರ ಮತ್ತೆ ವಿಚಾರಣೆಗೆ ಬರಲಿದೆ.
ಏಪ್ರಿಲ್ 16 ರಂದು ಹನುಮ ಜಯಂತಿಯಂದು ನಡೆದ ಮೆರವಣಿಗೆಯಲ್ಲಿ ಜಹಾಂಗೀರಪುರಿಯಲ್ಲಿಯೇ ಕಲ್ಲು ತೂರಾಟ ನಡೆದಿತ್ತು. ಅಂದಿನಿಂದ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಏತನ್ಮಧ್ಯೆ, ಎಂಸಿಡಿ ಜಹಾಂಗೀರ್ಪುರಿಯಲ್ಲಿರುವ ಅಕ್ರಮ ಅತಿಕ್ರಮ ಕಟ್ಟಡಗಳನ್ನ ನೆಲಸಮ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಇಂದು ಕಾರ್ಯವನ್ನ ಪ್ರಾರಂಭಿಸಿತ್ತು. ಬುಲ್ಡೋಜರ್ಗಳು ಸಹ ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಟ್ಟಡವನ್ನ ನೆಲಸಮ ಮಾಡುತ್ತಿವೆ. ಅಷ್ಟರಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ತಡೆ ನೀಡಿದ್ದಾರೆ.
ಹಿರಿಯ ವಕೀಲ ದುಶ್ಯಂತ್ ದವೆ ಅವರು ಎನ್ಡಿಎಂಸಿ ಮತ್ತು ಪಿಡಬ್ಲ್ಯೂಡಿ ಜಂಟಿ ಕಾರ್ಯಾಚರಣೆಯನ್ನು ಅಸಂವಿಧಾನಿಕ ಎಂದು ಹೇಳಿದ್ದಾರೆ. ಮಧ್ಯಾಹ್ನ 2ಗಂಟೆಗೆ ನಡೆಯಬೇಕಿದ್ದ ಕಾರ್ಯ ಕ್ರಮ ಬೆಳಗ್ಗೆ 9ಗಂಟೆಗೆ ಆರಂಭವಾಯಿತು ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಇಲ್ಲಿ ವಾಸಿಸುವವರಿಗೆ ನೋಟಿಸ್ ನೀಡಿರಲಿಲ್ಲ ಎಂದು ಕೋರ್ಟ್ ನಲ್ಲಿ ವಾದ ಮಾಡಿದ್ದಾರೆ.
ಮತ್ತೊಂದೆಡೆ ದೆಹಲಿ ಹೈಕೋರ್ಟ್ ಕೂಡ ಪ್ರಕರಣದ ವಿಚಾರಣೆಗೆ ಒಪ್ಪಿಗೆ ನೀಡಿದೆ. ಆದಾಗ್ಯೂ, MCD ಯ ಬುಲ್ಡೋಜರ್ ಕ್ರಮವನ್ನು ತಡೆಯಲು ನ್ಯಾಯಾಲಯವು ತಕ್ಷಣವೇ ನಿರಾಕರಿಸಿತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಅವರು ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ವಕೀಲರಿಗೆ ಸೂಚಿಸಿದರು ಮತ್ತು ಬುಲ್ಡೋಜರ್ಗಳ ಕ್ರಮದ ಬಗ್ಗೆ ನಾನು ಏನನ್ನೂ ಹೇಳುತ್ತಿಲ್ಲ ಆದರೆ ಅಧಿಕಾರಿಗಳು ನಿರ್ದೇಶನಗಳಿಗೆ ಸಿದ್ಧರಾಗಿರಬೇಕು ಎಂದು ಹೇಳಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಸುಪ್ರೀಂ ಕೋರ್ಟ್ ಈಗಾಗಲೇ ಪರಿಶೀಲಿಸಿದೆ ಎಂದು ಹೇಳಿದರು.