ರೂಲ್ಸ್ ಬ್ರೇಕ್ : ರಾಜಕಾರಣಿಗಳಿಗೆ ಕೊರೊನಾ ರೂಲ್ಸ್ ಅನ್ವಯಿಸಲ್ವಾ..?
ಶಿವಮೊಗ್ಗ : ರಾಜಕಾರಣಿಗಳಿಗೆ ಕೊರೊನಾ ಬರಲ್ವಾ..? ರೂಲ್ಸ್ ಅವರಿಗೆ ಅನ್ವಯ ಆಗಲ್ವಾ..? ಸದ್ಯ ರಾಜ್ಯದ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಇದು..!
ರಾಜ್ಯದಲ್ಲಿ ಕೊರೊನಾ ಹೆಚ್ಚಾಗ್ತಿದೆ ಎಂದು ಶುಕ್ರವಾರ ಸರ್ಕಾರ ಕೆಲ ನಿಯಮಗಳನ್ನ ಹೊರಡಿಸಿ ಆದೇಶ ಹೊರಡಿಸಿದೆ.
ಕೊರೊನಾ ಎರಡನೇ ಅಲೆಗೆ ಕಡಿವಾಣ ಹಾಕಲು ಸರ್ಕಾರ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಿದೆ.
ಆದ್ರೆ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ.
ಇಂದು ಶಿವಮೊಗ್ಗದ ಹಲವೆಡೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ರು. ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು.
ಇನ್ನು ಮಾಸ್ಕ್ ಅಂತೂ ಕೇಳಲೇಬೇಡಿ. ಎಲ್ಲರೂ ಹಲ್ಲು ಬಿಟ್ಟು ಫೋಟೋಗೆ ಫೋಸ್ ಕೊಟ್ಟಿದ್ದು ಬಿಟ್ಟರೇ ಕೊರೊನಾ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ.
ಸಚಿವರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಚಿವರು ಮತ್ತು ಅವರ ಜೊತೆಯಲ್ಲಿದ್ದ ಬೆಂಬಲಿಗರಿಗೆ ದಂಡ ಹಾಕೋರು ಯಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.