“ಏ ಸಿದ್ದರಾಮಯ್ಯ ನಿಂಗ್ ಬುದ್ದಿ ಇಲ್ವೇನಲೇ” ಅಂತ ನನ್ಗೆ ಕೇಳಕ್ಕೆ ಬರುವುದಿಲ್ವಾ..?
ಶಿವಮೊಗ್ಗ : ನನಗೂ ಏ ಸಿದ್ದರಾಮಯ್ಯ ನಿಂಗ್ ಬುದ್ದಿ ಇಲ್ವೇನಲೇ ಅಂತಾ ಕೇಳಕ್ಕೆ ಬರುವುದಿಲ್ವಾ. ಆದರೆ ಈ ರೀತಿಯ ಪದವನ್ನು ನಾನು ಬಳಕೆ ಮಾಡಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ವಿದೂಷಕ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಶಿವಮೊಗ್ಗದಲ್ಲಿ ಮಾತಾನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯನವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ವಿದೂಷಕ ಎಂಬ ಪದ ಬಳಕೆ ಮಾಡಿರುವುದನ್ನು ಖಂಡಿಸುತ್ತೇನೆ.
ಈ ರೀತಿಯ ಪದ ಬಳಕೆ ಮಾಡಬೇಡಿ ಎಂದು ಹಿಂದೆಯೂ ಅನೇಕ ಸಲ ಹೇಳಿದ್ದೇನೆ. ಸಿದ್ದರಾಮಯ್ಯ ತಮ್ಮ ಪದ ಬಳಕೆಯ ಬಗ್ಗೆ ಸುಧಾರಿಸಬೇಕಿದೆ. ಸಿದ್ದರಾಮಯ್ಯನವರು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಏಕವಚನದಲ್ಲಿ ಪದ ಬಳಕೆ ಮಾಡುತ್ತಾರೆ.
ನನಗೂ ಏ ಸಿದ್ದರಾಮಯ್ಯ ನಿಂಗ್ ಬುದ್ದಿ ಇಲ್ವೇನಲೇ ಅಂತಾ ಕೇಳಕ್ಕೆ ಬರುವುದಿಲ್ವಾ. ಆದರೆ ಈ ರೀತಿಯ ಪದವನ್ನು ನಾನು ಬಳಕೆ ಮಾಡಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ.
ನಮ್ಮ ಸರ್ಕಾರದ ಒಂದೇ ಒಂದು ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಸಿದ್ದರಾಮಯ್ಯನವರಿಗೆ ಆಗಲಿಲ್ಲ. ಅವರು ವಿರೋಧ ಪಕ್ಷದ ನಾಯಕರಾಗಿರುವಲ್ಲಿ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಗರಂ ಆದರು.