ಕಾಂಗ್ರೆಸ್ ಪಕ್ಷ ನಮಗೆಲ್ಲ ಹೆಮ್ಮೆ ಆಗಿತ್ತು. ಆದರೆ.. : ಈಶ್ವರಪ್ಪ
ಕೊಪ್ಪಳ : ಕಾಂಗ್ರೆಸ್ ಪಕ್ಷ ನಮಗೆಲ್ಲ ಹೆಮ್ಮೆ ಆಗಿತ್ತು. ಆದರೆ ಈಗಿನ ಕಾಂಗ್ರೆಸ್ಸಿನಲ್ಲಿ ನಾಯಕರೇ ಇಲ್ಲವಾಗಿದೆ. ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ, ಸಾವರ್ಕರ್ ಕಾಂಗ್ರೆಸ್ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಕುಷ್ಟಗಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ, ಡಿಕೆಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸುಳ್ಳು ಹೇಳೋವುದರಲ್ಲಿ ನಿಸ್ಸೀಮರು ಅಂತಾ ಟೀಕೆ ಮಾಡಿದ್ರು.
ಭಾರತದಲ್ಲಿ ನನ್ನ ಆಸ್ತಿ ಸುರಕ್ಷಿತವಾಗಿದೆ, ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್.ಶೆಟ್ಟಿ
ತಮ್ಮ ಭಾಷಣದಲ್ಲಿ ಈಶ್ವರಪ್ಪ, ರಾಜ್ಯದಲ್ಲಿ ಇಬ್ಬರು ಸುಳ್ಳು ಹೇಳುವವರು ಇದ್ದಾರೆ. ಇಬ್ಬರು ಸಿದ್ದರಾಮಯ್ಯ, ಇನ್ನೊಬ್ಬರು ಡಿಕೆಶಿವಕುಮಾರ್, ಇಬ್ಬರನ್ನು ಕರೆದುಕೊಂಡು ಬಂದು ಇಲ್ಲಿ ನಿಲ್ಲಿಸಬೇಕು. ಸುಳ್ಳು ಹೇಳೋದರಲ್ಲಿ ಲೆಕ್ಕವೇ ಇಲ್ಲವಾಗಿದೆ. ಒಂದು ಕಡೆ ಸಿದ್ದರಾಮಯ್ಯ ಪಾರ್ಟಿ, ಮತ್ತೊಂದು ಕಡೆ ಡಿಕೆ ಶಿವಕುಮಾರ್ ಪಾರ್ಟಿಯಾಗಿದೆ. ರಾಜ್ಯದಲ್ಲಿ ನೇರವಾಗಿ ಬೆತ್ತಲಾಗಿದ್ದಾರೆ. ಸಿದ್ದರಾಮಯ್ಯ ರೆಸಾರ್ಟ್ ಗೆ ಹೋಗ್ತಾರೆ. ಡಿ.ಕೆ ಶಿವಕುಮಾರ್ ನಂದೇನೂ ಪಾತ್ರ ಇಲ್ಲ ತನ್ವೀರ್ ಸೇಠ್ ಕೇಳಿ ಅಂತಾರೆ. ಕಾಂಗ್ರೆಸ್ಸಿಗೆ ಎಂತಹ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ರು.
ಇದೇ ವೇಳೆ ಕಾಂಗ್ರೆಸ್ ಗೆ ಪರ್ಮನೆಂಟ್ ರಾಷ್ಟ್ರೀಯ ಅಧ್ಯಕ್ಷರೇ ಇಲ್ಲ ಅಂತಾ ಕುಟುಕಿದ ಈಶ್ವರಪ್ಪ, ಈಗಿನ ಕಾಂಗ್ರೆಸ್ ನಾಯಕ ಯಾರು ಅಂತಾ ಪ್ರಶ್ನೆ ಮಾಡಿದ್ರು. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ನಮಗೆಲ್ಲ ಹೆಮ್ಮೆ ಆಗಿತ್ತು. ಆದರೆ ಈಗಿನ ಕಾಂಗ್ರೆಸ್ಸಿನಲ್ಲಿ ನಾಯಕರೇ ಇಲ್ಲವಾಗಿದೆ. ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ, ಸಾವರ್ಕರ್ ಕಾಂಗ್ರೆಸ್ ಬಗ್ಗೆ ನಮಗೆ ಹೆಮ್ಮೆ ಇದೆ. ಇದೀಗ ಕಾಂಗ್ರೆಸ್ಸಿನಲ್ಲಿ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗುತ್ತಿಲ್ಲ ಎಂದು ಟೀಕೆ ಮಾಡಿದರು.
ಮುಂದುವರಿದು ಎಂದಿನಂತೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಗೋ ಶಾಪದಿಂದಲೇ ಸಿದ್ದರಾಮಯ್ಯ ಸೋತಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದ್ರೆ ನಾವು ಗೋ ಹತ್ಯೆ ಮಾಡ್ತೀವಿ ಅಂತಾ ಹೇಳ್ತಾರೆ. ಹಾಗಾಗಿ ಗೋ ಮಾತೆ ಶಾಪದಿಂದ ಕಾಂಗ್ರೆಸ್ ಸರ್ಕಾರ ಹೊಯ್ತು ಅಂತಾ ವಾಗ್ದಾಳಿ ನಡೆಸಿದ್ರು.
ಇನ್ನ ಡಿಕೆಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ನಾನೇ ಸಿಎಂ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದ್ರೆ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿ ನೋಡೋಣ ಅಂತಾ ಈಶ್ವರಪ್ಪ ಸವಾಲ್ ಹಾಕಿದ್ರು.