“ಕಬ್ಜ ಟೀಸರ್ ರಿಲೀಸ್ ಲಾಂಚ್ ಮುಂದೂಡಿಕೆ ” : ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ..!
ಬೆಂಗಳೂರು : ಅಪ್ಪು ನಿಧನದ ನೋವಿನಿಂದ ಇನ್ನೂ ಚಂದನವನ , ಸಿನಿಮಾ ತಾರೆಯರು , ಆಪ್ತರು , ಕುಟುಂಬಸ್ಥರು , ಅಭಿಮಾನಿಗಳು , ಇಡೀ ಕರ್ನಾಟಕ ಇನ್ನೂವರೆಗೂ ಹೊರಬಂದಿಲ್ಲ.. ಅವರನ್ನ ನೆಪುಇಸಿಕೊಳ್ತಾ ಈಗಲೂ ಭಾವಕರಾಗುತ್ತಾ ಪೋಸ್ಟ್ ಗಳನ್ನ ಹಾಕಲಾಗ್ತಿದೆ.. ಈ ನಡುವೆ ಈಗಾಗಲೇ ಭಾರತದಾದ್ಯಂತ ಸಂಚಲನ ಮೂಡಿಸಿರುವ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡ್ತಾಯಿದ್ದಾರೆ..
ದೀಪಾವಳಿ ಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡೋದಾಗಿ ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು. ಆದ್ರೆ ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಯಿತು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ನಿರ್ದೇಶಕ ಆರ್ ಚಂದ್ರು ಅವರು ನಮ್ಮ ಕಬ್ಜ ತಂಡಕ್ಕೂ ಅಪ್ಪು ಅವರ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ..