BJP | ʼಅಲ್ಪಮತೀಯವಾದʼ ಸಿದ್ದರಾಮಯ್ಯ ಸಾಕಿದ ಗಿಣಿ
ಬೆಂಗಳೂರು : ಕರ್ನಾಟಕದಲ್ಲಿ ತಲೆ ಎತ್ತಿರುವ ʼಅಲ್ಪಮತೀಯವಾದʼ ಸಿದ್ದರಾಮಯ್ಯ ಸಾಕಿದ ಗಿಣಿ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಹುಬ್ಬಳ್ಳಿ ಗಲಭೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಕಿಡಿಕಾರಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ.. ಕಾನೂನು – ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿರುವ #ಬುರುಡೆರಾಮಯ್ಯ ಅವರೇ, ಕಾನೂನು-ಸುವ್ಯವಸ್ಥೆಗೆ ಭಂಗ ತರುತ್ತಿರುವವರ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ? ಮತ ಕಳೆದುಕೊಳ್ಳುವ ಭಯವೇ? ಇಂದು ರಾಜ್ಯದಲ್ಲಿ ʼಅಲ್ಪಮತೀಯರುʼ ಸಮಾಜಘಾತುಕರಾಗಿ ಬೆಳೆಯಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದೆ.
ಕಾನೂನು – ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿರುವ #ಬುರುಡೆರಾಮಯ್ಯ ಅವರೇ,
ಕಾನೂನು-ಸುವ್ಯವಸ್ಥೆಗೆ ಭಂಗ ತರುತ್ತಿರುವವರ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ? ಮತ ಕಳೆದುಕೊಳ್ಳುವ ಭಯವೇ?
ಇಂದು ರಾಜ್ಯದಲ್ಲಿ ʼಅಲ್ಪಮತೀಯರುʼ ಸಮಾಜಘಾತುಕರಾಗಿ ಬೆಳೆಯಲು ಸಿದ್ದರಾಮಯ್ಯ ಅವರೇ ನೇರ ಕಾರಣ.#CONgressSupportsJihadis
— BJP Karnataka (@BJP4Karnataka) April 18, 2022
ಕರ್ನಾಟಕದಲ್ಲಿ ತಲೆ ಎತ್ತಿರುವ ʼಅಲ್ಪಮತೀಯವಾದʼ ಸಿದ್ದರಾಮಯ್ಯ ಸಾಕಿದ ಗಿಣಿ. ಹಿಂದೂ ಕಾರ್ಯಕರ್ತರ ವಿರುದ್ದ ಇದೇ ಶಕ್ತಿಯನ್ನು ಗುರಾಣಿ ಮಾಡಿದ್ದರು.ಸಿದ್ದರಾಮಯ್ಯನವರೇ, ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಟ್ಟು, ಆ ಸಂಘಟನೆಯನ್ನು ಹಿಂದೂ ಕಾರ್ಯಕರ್ತರ ಮೇಲೆ ಛೂಬಿಟ್ಟ ಔರಂಗಜೇಬ್ ನೀವಲ್ಲವೇ ಎಂದು ಬಿಜೆಪಿ ಕುಟುಕಿದೆ.
ಡಿಜೆ ಹಳ್ಳಿ ಗಲಭೆಗೆ ಕುಮ್ಮಕ್ಕು ನೀಡಿದ್ದೇ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಗಲಭೆಯ ಪ್ರಮುಖ ಆರೋಪಿಯಾಗಿದ್ದರು.ಗಲಭೆಗೆ ಪ್ರೋತ್ಸಾಹಿಸುವುದು, ಆ ಗಲಭೆಯ ಹೊಣೆಯನ್ನು ಬಿಜೆಪಿ ಸರ್ಕಾರದ ಮೇಲೆ ಹೊರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ.ಹುಬ್ಬಳ್ಳಿ ಗಲಭೆಯೂ ಇದೇ ಮಾದರಿಯದು!
ಪಿಎಫ್ಐ ಕೇವಲ ಮತೀಯ ಸಂಘಟನೆಯಲ್ಲ, ಸಂಘಟಿತ ಅಪರಾಧದಲ್ಲೂ ಅದು ನಿಸ್ಸೀಮ ಎಂದು ಜಾಗೃತ ಸಮಾಜ ಹಾಗೂ ಮಾಧ್ಯಮ ಎಚ್ಚರಿಸಿತ್ತು.
ಆದರೆ ಮುಖ್ಯಮಂತ್ರಿಯಾಗಿದ್ದ @siddaramaiah ಉಡಾಫೆಯಾಗಿ ವರ್ತಿಸಿ ಕ್ರಮಿನಲ್ ಪ್ರಕರಣಗಳನ್ನು ಹಿಂಪಡೆದದ್ದು ಮಾತ್ರವಲ್ಲದೆ ಮತಾಂಧರೊಂದಿಗೆ ಇಫ್ತಾರ್ ಕೂಟ ನಡೆಸಿದರು.#CONgressSupportsJihadis
— BJP Karnataka (@BJP4Karnataka) April 18, 2022
ಅಪರಾಧದ ಪ್ರಶ್ನೆ ಎದುರಾದಾಗ ಕಾಂಗ್ರೆಸ್ ಯಾವುದೇ ಜಾತಿ, ಧರ್ಮದ ಪರವಾಗಿ ಇರುವುದಿಲ್ಲ ಸುಳ್ಳು ಹೇಳುವ ಸಿದ್ದರಾಮಯ್ಯ ಅವರೇ,ಡಿಜೆ ಹಳ್ಳಿ ಪ್ರಕರಣದಲ್ಲಿ, ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆ ಮೇಲೆ ʼಅಲ್ಪಮತೀಯರುʼ ಬೆಂಕಿ ಹಚ್ಚಿದಾಗ ಶಾಸಕರ ಪರವಾಗಿ ನಿಲ್ಲುವ ಬದಲು ಬೆಂಕಿ ಹಚ್ಚಿದವರ ಪರವಾಗಿ ನಿಂತಿದ್ದೇಕೆ?
ಪಿಎಫ್ಐ ಕೇವಲ ಮತೀಯ ಸಂಘಟನೆಯಲ್ಲ, ಸಂಘಟಿತ ಅಪರಾಧದಲ್ಲೂ ಅದು ನಿಸ್ಸೀಮ ಎಂದು ಜಾಗೃತ ಸಮಾಜ ಹಾಗೂ ಮಾಧ್ಯಮ ಎಚ್ಚರಿಸಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉಡಾಫೆಯಾಗಿ ವರ್ತಿಸಿ ಕ್ರಮಿನಲ್ ಪ್ರಕರಣಗಳನ್ನು ಹಿಂಪಡೆದದ್ದು ಮಾತ್ರವಲ್ಲದೆ ಮತಾಂಧರೊಂದಿಗೆ ಇಫ್ತಾರ್ ಕೂಟ ನಡೆಸಿದರು.
ಡಿಜೆ ಹಳ್ಳಿ – ಶಾಸಕರ ಮನೆಗೆ ಬೆಂಕಿ, ಪೊಲೀಸ್ ಠಾಣೆ ಮೇಲೆ ದಾಳಿ, ಹುಬ್ಬಳ್ಳಿ – ಕಲ್ಲು ತೂರಾಟ, ಪೊಲೀಸ್ ವಾಹನ ಮೇಲೆ ದಾಳಿ,ಎರಡೂ ಪ್ರಕರಣದಲ್ಲೂ ಲೋಡ್ ಗಟ್ಟಲೆ ಕಲ್ಲು ತೂರಾಟ,ಈ ಕಲ್ಲು ಸಂಗ್ರಹ ಮಾಡಿದ ʼಅಲ್ಪಮತೀಯರನ್ನುʼ ಸಿದ್ದರಾಮಯ್ಯ, ಡಿಕೆಶಿ ಪ್ರಶ್ನಿಸುವುದಿಲ್ಲವೇಕೆ?
ದನಗಳ್ಳನನ್ನು ಗುಂಡಿಟ್ಟು ಕೊಂದ ಪೊಲೀಸರಿಗೆ ಅಮಾನತು ಶಿಕ್ಷೆ ನೀಡಿ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ @siddaramaiah ಅವರಿಗೆ ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ಗೃಹ ಇಲಾಖೆಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?#CONgressSupportsJihadis
— BJP Karnataka (@BJP4Karnataka) April 18, 2022
ದನಗಳ್ಳನನ್ನು ಗುಂಡಿಟ್ಟು ಕೊಂದ ಪೊಲೀಸರಿಗೆ ಅಮಾನತು ಶಿಕ್ಷೆ ನೀಡಿ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ ಸಿದ್ದರಾಮಯ್ಯ ಅವರಿಗೆ ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ಗೃಹ ಇಲಾಖೆಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದೆ. Karnataka bjp slams siddaramaiah on twitter