ಬಿಜೆಪಿ ಎಂಬ ಡ್ರಾಮಾ ಕಂಪೆನಿಯಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ
ಬೆಂಗಳೂರು : ಹಲಾಲ್ ಕಟ್ ತಿನ್ನಬೇಡಿ ಎಂದು ಸಿ.ಟಿ.ರವಿ ಹೇಳಿದ್ದಾರಲ್ವಾ ಎಂಬ ಮಾಧ್ಯಮ ಗಳ ಪ್ರಶ್ನೆಗೆ ಸಚಿವ ಬಿ.ಸಿ.ನಾಗೇಶ್ ಉತ್ತರಿಸುತ್ತಾ, ಸಿ.ಟಿ.ರವಿ ಮಂತ್ರಿಗಳಲ್ಲ. ಅವರು ಮಾಜಿಗಳಾದ್ರೂ ಇನ್ನೂ ಅವರನ್ನ ನೀವು ಮಂತ್ರಿಗಳಾಗಿ ಇಟ್ಟು ಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಬಿ.ಸಿ.ನಾಗೇಶ್ ಅವರ ಈ ಹೇಳಿಕೆಯನ್ನ ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಎಂಬ ಡ್ರಾಮಾ ಕಂಪೆನಿಯಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ, ಒಬ್ಬರು ತೊಟ್ಟಿಲು ತೂಗುತ್ತಾರೆ, ಮತ್ತೊಬ್ಬರು ಚಿವುಟುತ್ತಾರೆ!
ರಾಜ್ಯದಲ್ಲಿ ಕೋಮು ದ್ವೇಷ ಸ್ಥಾಪಿಸುತ್ತಿರುವ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ತಮ್ಮೊಳಗಿನ #BJPvsBJP ಕಿತ್ತಾಟಕ್ಕೂ ಬಳಸಿಕೊಳ್ಳುತ್ತಿದ್ದಾರೆ!
ಈಗ ಹೊಸ ಜೋಡಿ – ಸಿಟಿ ರವಿ vs ಬಿ ಸಿ ನಾಗೇಶ್ ಎಂದು ಕುಟುಕಿದೆ. karnataka congress vs bjp tweet war