57 ಗಂಟೆ ಕರುನಾಡು ಲಾಕ್ : ವೀಕೆಂಡ್ ನಿಯಮ ಫುಲ್ ಟೈಟ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಲಾಕ್ ಜಾರಿ ಮಾಡಿದೆ. ಈ ಹಿನ್ನೆಲೆ ಇಂದು ರಾತ್ರಿ 9 ಗಂಟೆಯಿಂದ 57 ಗಂಟೆ ಕರುನಾಡು ಸ್ತಬ್ಧವಾಗಲಿದೆ.
ಇಂದು ರಾತ್ರಿ 9 ಗಂಟೆ ಬಳಿಕ ರಸ್ತೆಯಲ್ಲಿ ಯಾರೂ ಓಡಾಂಗಿಲ್ಲ. ಅಗತ್ಯ ಸೇವೆ ಬಿಟ್ಟು ಎಲ್ಲವೂ ಬಂದ್ ಆಗಲಿದ್ದು, ಮನೆಯಿಂದ ಹೊರ ಬಂದ್ರೆ ಲಾಠಿ ಏಟು ತಪ್ಪಿದ್ದಲ್ಲ. ನಾಳೆ ಎಂದಿನಂತೆ ರೈಲು ವಿಮಾನ ಇರುತ್ತೆ.
ಮದುವೆಗೆ 50 ಜನ ಮಾತ್ರ ಅವಕಾಶ ನೀಡಲಾಗಿದೆ. ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಅವಕಾಶ ಇರುತ್ತೆ. ಅದು ಕೂಡ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ. ಇದಲ್ಲದೆ ಬೆಳಗ್ಗೆ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಟಫ್ ರೂಲ್ಸ್ ಜಾರಿಗೆ ಬರಲಿದೆ. ನಗರದಲ್ಲಿ 240 ಚೆಕ್ ಪಾಯಿಂಟ್ ಗಳಿರಲಿದ್ದು, ಒಂದು ವೇಳೆ ಯಾರಾದ್ರೂ ವಾಹನದಲ್ಲಿ ಓಡಾಡಿದ್ರೆ, ವಾಹನ ಸೀಜ್ ಮಾಡಿ ದಂಡವನ್ನೂ ಕೂಡ ಹಾಕಲಾಗುತ್ತದೆ.