ಕರ್ನಾಟಕದಲ್ಲೂ ಕೊರೋನಾ ತಡೆಗೆ ಮಹಾರಾಷ್ಟ್ರ ರೀತಿ ಕಟ್ಟುನಿಟ್ಟಿನ ಸೆಕ್ಷನ್ 144 ಜಾರಿ ?
ಮಹಾರಾಷ್ಟ್ರದಾದ್ಯಂತ ಕೊರೋನಾ ತಡೆಗೆ ಕಠಿಣ ನಿರ್ಬಂಧಗಳ ಭಾಗವಾಗಿ 15 ದಿನಗಳ ಕಟ್ಟುನಿಟ್ಟಿನ ಸೆಕ್ಷನ್ 144 ಅನ್ನು ಹೇರಲಾಗಿದೆ.
ಕರ್ನಾಟಕವು ಕೂಡ ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳ ಹರಡುವಿಕೆಯನ್ನು ತಡೆಗಟ್ಟಲು ಇದೇ ರೀತಿಯ ಕ್ರಮಗಳನ್ನು ಪರಿಗಣಿಸುತ್ತಿದೆ ಎಂದು ಮಾಹಿತಿಗಳು ತಿಳಿಸಿದೆ.
ಏಪ್ರಿಲ್ 7 ರಿಂದ ಅಧಿಕಾರಿಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ. ಏಪ್ರಿಲ್ 20 ರವರೆಗೆ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಹೆಚ್ಚುತ್ತಿರುವ ಪ್ರಕರಣಗಳನ್ನು ಎದುರಿಸಲು ಕರ್ಫ್ಯೂ ಸೇರಿದಂತೆ ಹೆಚ್ಚಿನ ನಿರ್ಬಂಧಗಳನ್ನು ಹೇರಲು ಒತ್ತಾಯಿಸುತ್ತಿದೆ ಎಂದು ವರದಿಗಳು ತಿಳಿಸಿದೆ.
ರಾಜಕೀಯ ರ್ಯಾಲಿಗಳು ಸೇರಿದಂತೆ ಎಲ್ಲಾ ಸಭೆಗಳನ್ನು ತಡೆಯುವ ಉದ್ದೇಶದಿಂದ ಸೆಕ್ಷನ್ 144 ರಲ್ಲಿ ಸಮಿತಿ ಸಲಹೆಗಳನ್ನು ನೀಡಿತು. ವರದಿಯ ಪ್ರಕಾರ ಏಪ್ರಿಲ್ 17 ರಂದು ನಡೆವ ಉಪಚುನಾವಣೆಯ ನಂತರ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸುವುದು ಸೇರಿದಂತೆ ಕಠಿಣ ನಿರ್ಬಂಧಗಳನ್ನು ವಿಧಿಸುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ, ರಾಜ್ಯದಲ್ಲಿ ಲಾಕ್ ಡೌನ್ ವಿಧಿಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಸೋಂಕುಗಳ ತೀವ್ರ ಏರಿಕೆಯ ನಡುವೆ ಮಸೀದಿಗಳಲ್ಲಿ ರಂಜಾನ್ ತಿಂಗಳಿಗೆ ಸಂಬಂಧಿಸಿದಂತೆ ಆಚರಣೆಗಳನ್ನು ಆಚರಿಸಲು ರಾಜ್ಯವು ಈ ಹಿಂದೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬೆಂಗಳೂರಿನಲ್ಲಿನ ಆದೇಶದ ಪ್ರಕಾರ, ಶಾಪಿಂಗ್ ಮಾಲ್ಗಳು, ಮಾರುಕಟ್ಟೆಗಳು, ಡಿಪಾರ್ಟ್ಮೆಂಟ್ ಸ್ಟೋರ್ಗಳು, ಸಿನೆಮಾ ಚಿತ್ರಮಂದಿರಗಳು ತಮ್ಮ ಗ್ರಾಹಕರು ಅಥವಾ ಸಂದರ್ಶಕರು ಕೋವಿಡ್-19 ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
ಬೀಟ್ರೂಟ್ ಜ್ಯೂಸ್ ನ ಆರೋಗ್ಯ ಪ್ರಯೋಜನಗಳು#saakshatv #healthtips #Beetrootjuice https://t.co/jmBuMlUODi
— Saaksha TV (@SaakshaTv) April 13, 2021
ಅವಲಕ್ಕಿ ಪಾಯಸ#Saakshatv #cookingrecipe https://t.co/imvm5nTZ04
— Saaksha TV (@SaakshaTv) April 12, 2021
ರಾತ್ರಿ ಕಾವಲುಗಾರ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಯಶೋಗಾಥೆ#Nightwatchman #IIM #AssistantProfessor https://t.co/zP904yyo08
— Saaksha TV (@SaakshaTv) April 13, 2021
ಆವತೀಯತೆ: ಅಧ್ಯಾಯ-೧:#ಆವತೀಯತೆ #Saakshatv #aavathiyathe #ವಿಪ್ರಭಾ https://t.co/wgOjU1qfsN
— Saaksha TV (@SaakshaTv) April 14, 2021
#Karnataka #section144 #Maharashtra