ಮಂಡ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ (D.K Shivakumar) ಕೆಆರ್ಎಸ್ ಜಲಾಶಯಕ್ಕೆ (KRS Dam) ಭೇಟಿಕೊಟ್ಟ ಸಂದರ್ಭದಲ್ಲಿ ವಾರಣಾಸಿಯ ಗಂಗಾರತಿ (Ganga Aarti) ಮಾದರಿಯಲ್ಲೇ ಕಾವೇರಿ ಆರತಿ (Kaveri Arti) ಮಾಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಒಂದು ತಿಂಗಳ ಒಳಗೆ ಈ ಕಾರ್ಯಕ್ರಮದ ಕುರಿತು ವರದಿ ಸಲ್ಲಿಸಬೇಕು. ಕಾವೇರಿ ಆರತಿಗೆ ಹೊಸ ಯೋಜನೆ ರೂಪಿಸಿದ್ದೇವೆ. ಧಾರ್ಮಿಕ ದತ್ತಿ, ನೀರಾವರಿ ಇಲಾಖೆಯಿಂದ ಕಾವೇರಿ ಆರತಿ ಮಾಡಲು ನಿರ್ಧರಿಸಿದ್ದೇವೆ. ಬೃಂದಾವನಕ್ಕೆ ಹೊಸ ರೂಪ ಕೊಡಲು ಸರ್ಕಾರಕ್ಕೆ ಮನವಿ ಬಂದಿದೆ. ಸಂಪುಟದಲ್ಲಿಯೂ ಇದಕ್ಕೆ ಅನುಮತಿ ಸಿಗಲಿದೆ.
ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು. 40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಈಗ 30 ಟಿಎಂಸಿ ನೀರು ಹರಿದು ಹೋಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ 6 ಜಿಲ್ಲೆಗಳ ಜೀವನದಿಯಾಗಿರುವ ಕಾವೇರಿ ನದಿ, ಮಳೆಯ ಅಬ್ಬರದಿಂದ ತುಂಬಿ ಹರಿಯುತ್ತಿದೆ. ಕೆಆರ್ಎಸ್ ಡ್ಯಾಂ ಭರ್ತಿ ಹಂತಕ್ಕೆ ತಲುಪಿದೆ.








