‘ಹೊಂಬಾಳೆ’ 11ನೇ ಸಿನಿಮಾಗೆ ಹೀರೋ ಕಿಚ್ಚ ಅಲ್ವೇ ಅಲ್ಲ..? ಹೀರೋ – ಡೈರೆಕ್ಟರ್ ಒಬ್ರೇ..!
ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾ ನೀಡಿ ಇಡೀ ಭಾರತೀಯ ಸಿನಿಮಾರಂಗದ ಗಮನ ಸೆಳೆದಿರುವ ಹೊಂಬಾಳೆ ಫಿಲಮ್ಸ್ ಇದೀಗ ಮತ್ತೊಮ್ಮೆ ‘ಕಿಚ್ಚು’ ಹೊತ್ತಿಸಿದೆ. ಇತ್ತೀಚೆಗಷ್ಟೇ 9ನೇ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ದ್ವಿತ್ವ ಸಿನಿಮಾ ಅಪ್ ಡೇಟ್ಸ್ ನೀಡಿತ್ತು.. ಹೊಂಬಾಳೆ ಫಿಲಮ್ಸ್ ನ 10ನೇ ಸಿನಿಮಾದ ಟೈಟಲ್ ಹಾಗೂ ಹೀರೋ ಅನೌನ್ಸ್ ಮಾಡಿತ್ತು.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರುತ್ತಿರೋದಾಗಿ ಘೋಷಿಸಿದ್ದ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡ್ತಿದೆ..
ಇದೀಗ 11ನೇ ಸಿನಿಮಾದ ಅಪ್ ಡೇಟ್ಸ್ ನೀಡಿದ್ದು, ಆಗಸ್ಟ್ 6 ಅಂದ್ರೆ ನಾಳೆ ಬೆಳಿಗ್ಗೆ 11 ಗಂಟೆಗೆ ಸಿನಿಮಾದ ಟೈಟಲ್ , ಹೀರೋ ಪರಿಚಯ ಮಾಡಿಕೊಡೋದಾಗಿ ಹೇಳಿ , ಸಸ್ಪೆನ್ಸ್ ನೀಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.. ಮತ್ತೊಮ್ಮೆ ಸಿನಿಪ್ರಿಯರ ದೃಷ್ಟಿ ಸ್ಟಾರ್ ನಟರತ್ತ ನೆಟ್ಟಿದೆ.. ಯಾರಿರಬಹುದು ಹೀರೋ ಅನ್ನೋ ಹುಡುಕಾಟದ ನಡುವೆ ಜೋರಾಗಿ ಕೇಳಿಬರುತ್ತಿದ್ದ ಹೆಸರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರದ್ದು.. ಕಿಚ್ಚು ಅನ್ನೋ ಪದ ಕೇಳ್ತಿದ್ದಂತೆ ಕಿಚ್ಚ ಇರಬಹುದಾ ಅನ್ನೋ ಅನುಮಾನ ಸಹಜವಾಗಿಯೇ ಮೂಡಿತ್ತು.
ಆದ್ರೆ ಇದೀಗ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿಲ್ಲ ಎನ್ನಲಾಗ್ತಿದೆ.. ಆದ್ರೆ ನಿರ್ದೇಶಕ , ನಟ ರಿಷಬ್ ಶೆಟ್ಟಿ ಅವರೇ ಈ ಸಿನಿಮಾದ ನಾಯಕ ಹಾಗೂ ನಿರ್ದೇಶಕರೂ ಕೂಡ ಆಗಿರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.. ಆದ್ರೆ ಎಲ್ಲದಕ್ಕೂ ನಾಳೆ ಬೆಳಿಗ್ಗೆ 11 ಗಂಟೆಗೆ ಉತ್ತರ ಸಿಗಲಿದೆ..
ಅಂದ್ಹಾಗೆ ಹೊಂಬಾಳೆ ಪ್ಯಾನ್ ಇಂಡಿಯಾ ಸಿನಿಮಾ , ಬಾಹುಬಲಿ ಪ್ರಭಾಸ್ , ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಗೂ ಬಂಡವಾಳ ಹೂಡ್ತಿದೆ.. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿದೆ.. ಆದ್ರೆ ಸಿನಿಮಾದ ಹೊಸ ರಿಲೀಸ್ ದಿನಾಂಕ ಇನ್ನೂ ಅನೌನ್ಸ್ ಆಗಬೇಕಿದೆ.. ಈ ನಡುವೆ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಧಮಾಕಾ ನ್ಯೂಸ್ ಕೊಡ್ತಿದೆ..