RCB ಕಪ್ ಕನಸು ಭಗ್ನ – ಕಿಚ್ಚ ಸುದೀಪ್ ಹೇಳಿದ್ದೇನು..?
ಈ ಬಾರಿಯಾದ್ರೂ ಕಪ್ ನಮ್ದೇ ಅಂದುಕೊಂಡಿದ್ದ RCB ಅಭಿಮಾನಿಗಳು ನಿರಾಸೆ ಅನುಭವಿಸುವಂತಾಗಿದೆ. ಎಲಿಮಿನೇಟರ್ ನಲ್ಲಿ ಕೊಹ್ಲಿ ಪಡೆ ಕೆಕೆಆರ್ ವಿರುದ್ಧ ಸೋಲನುಭವಿಸಿದೆ. ಇನ್ನೂ ಬೇಸರದ ಸಂಗತಿಯೆಂದ್ರೆ ವಿರಾಟ್ ಕೊಹ್ಲಿ ಕಪ್ ಗೆಲ್ಲದೇ ಕ್ಯಾಪ್ಟನ್ಸಿ ಇಂದ ಇಳಿದಿರುವುದು. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ಮತ್ತೊಂದೆಡೆ ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಅವರು ಕೂಡ ಕ್ರಿಕೆಟ್ ಅದ್ರಲ್ಲೂ RCB ಫ್ಯಾನ್ ಎನ್ನುವ ವಿಚಾರ ಎಲ್ರಿಗೂ ಗೊತ್ತೇ ಇದೆ. ಕಿಚ್ಚ ಸುದೀಪ್ ಅವರು ನಿನ್ನೆಯ ಮ್ಯಾಚ್ ಬಗ್ಗೆ ಕೊಹ್ಲಿ ಕಡೆಯ ನಾಯಕತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ಕೆಟ್ಟ ಸಮಯ RCB….ತುಂಬಾ ಫೈಟ್ ಇತ್ತು. ಆದರೂ ಗೆಲುವಿಗೆ ಗಟ್ಟಿಯಾಗಿ ಹೋರಾಡಿದರು. ನಾವು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಮಿಸ್ ಮಾಡಿಕೊಳ್ಳುತ್ತೇವೆ. ನೀವು ತೆಗೆದುಕೊಂಡಿರುವುದು ಬಹಳ ಕಠಿಣವಾದ ನಿರ್ಧಾರವೆಂದು ನಮಗೆ ಗೊತ್ತಿದೆ. ಫೈನಲ್ ನಲ್ಲಿ RCBಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. RCB ಫಾರ್ ಎವರ್” ಎಂದು ಟ್ವೀಟ್ ಮಾಡಿದ್ದಾರೆ.
ಕಪ್ ಗೆಲ್ಲದೇ ಇದ್ರೂ #ban ಆಗದೇ #fixing ಮಾಡದೇ ಪ್ರತಿ ಸಲ ಮನಗೆಲ್ಲುವ ಟೀಮ್ RCB : ಸಿಂಪಲ್ ಸುನಿ..!