ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ದೇವೇಗೌಡರ ಹೆಸರು ಬಿಟ್ಟು ಸ್ವಂತ ಶಕ್ತಿ ಮೇಲೆ ರಾಜಕೀಯ ಮಾಡಿ: ಅಪ್ಪ-ಮಕ್ಕಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಸವಾಲು

Leave Deve Gowda's name and do politics on your own strength: Minister Chaluvarayaswamy's challenge to fathers and sons

Shwetha by Shwetha
November 3, 2025
in ರಾಜ್ಯ, Newsbeat, Politics, State, ರಾಜಕೀಯ
Former Prime Minister HD Devegowda and his son HD Kumaraswamy. -KPN ### HD Devegowda

Former Prime Minister HD Devegowda and his son HD Kumaraswamy. -KPN ### HD Devegowda

Share on FacebookShare on TwitterShare on WhatsappShare on Telegram

ಮಂಡ್ಯ: “ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಇನ್ನು ಎಷ್ಟು ವರ್ಷ ತಾತ ದೇವೇಗೌಡರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೋ ಗೊತ್ತಿಲ್ಲ. ದೇವೇಗೌಡರ ನೆರಳಿನಿಂದ ಹೊರಬಂದು ಸ್ವಂತ ಶಕ್ತಿಯ ಮೇಲೆ ರಾಜಕಾರಣ ಮಾಡುವುದನ್ನು ಕಲಿಯಲಿ,” ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.

ದೇವೇಗೌಡರ ಕುಟುಂಬ ಸಾಕಷ್ಟು ಚುನಾವಣೆಗಳನ್ನು ನೋಡಿದೆ ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಿಖಿಲ್ ಅವರು ನಮಗೆ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ದೇವೇಗೌಡರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದರೂ ಅವರು ಪದೇ ಪದೇ ದೇವೇಗೌಡರ ಹೆಸರನ್ನು ಏಕೆ ಎಳೆದು ತರುತ್ತಾರೆ? ತಮ್ಮಿಂದ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಹಿರಿಯರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ,” ಎಂದು ಚಲುವರಾಯಸ್ವಾಮಿ ಛೇಡಿಸಿದರು.

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

November 10, 2025

ಡಿಸಿಸಿ ಬ್ಯಾಂಕ್ ಹಳೆಯ ಘಟನೆ ಕೆದಕಿದ ಸಚಿವರು

ಹಿಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯ ಘಟನೆಯನ್ನು ನೆನಪಿಸಿಕೊಂಡ ಸಚಿವರು, “ಅಂದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅಧಿಕಾರದಲ್ಲಿದ್ದ ಅವರು ನಮ್ಮ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದರು. ಕೇವಲ 24 ಗಂಟೆಗಳಲ್ಲಿ ಸಿ.ಪಿ. ಉಮೇಶ್ ಅವರನ್ನು ನಾಮನಿರ್ದೇಶನದ ಮೂಲಕ ಕರೆತಂದು ಅಧ್ಯಕ್ಷರನ್ನಾಗಿ ಮಾಡಿದರು. ಆಗ ಕೇವಲ 3 ಸ್ಥಾನ ಗೆದ್ದಿದ್ದ ಜೆಡಿಎಸ್ ಆಡಳಿತ ನಡೆಸಿತು. ಆ ಸಮಯದಲ್ಲಿ ಅವರಿಗೆ ಪ್ರಜಾಪ್ರಭುತ್ವ, ಕಾನೂನು ಮತ್ತು ಸಾಮಾಜಿಕ ನ್ಯಾಯ ಎಲ್ಲಿಗೆ ಹೋಗಿತ್ತು? ಈ ಬಗ್ಗೆ ನಿಖಿಲ್ ಮೊದಲು ಅವರ ತಂದೆಗೆ ಬುದ್ಧಿ ಹೇಳಲಿ,” ಎಂದು ಸಲಹೆ ನೀಡಿದರು.

ನಾವು ವಾಮಮಾರ್ಗದ ರಾಜಕೀಯ ಮಾಡುವುದಿಲ್ಲ

ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ನಾವು ಯಾರಿಗೂ ಹೇಳಿಲ್ಲ. ಅವರು ಧೈರ್ಯವಾಗಿ ಚುನಾವಣೆ ಎದುರಿಸಬೇಕಿತ್ತು. “ಪಾಂಡವಪುರದಲ್ಲಿ ನಮಗೆ ಹೆಚ್ಚು ಮತಗಳಿಲ್ಲ, ನಾವು ಗೆಲ್ಲುವುದಿಲ್ಲ ಎಂದು ಗೊತ್ತಿದೆ. ಆದರೂ ಸೋಲುತ್ತೇವೆಂದು ತಿಳಿದಿದ್ದರೂ ರೈತ ಸಂಘದ ಜೊತೆಗೂಡಿ ನಾವು ಹೋರಾಟ ನಡೆಸುತ್ತಿದ್ದೇವೆ. ನಾವು ಎಂದಿಗೂ ವಾಮಮಾರ್ಗದ ರಾಜಕಾರಣ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಹಾಸನದಲ್ಲಿ ಜೆಡಿಎಸ್ ಗೆದ್ದಿರುವುದನ್ನು ಉಲ್ಲೇಖಿಸಿ, “ಹಾಸನದಲ್ಲಿ ಜೆಡಿಎಸ್ ಗೆದ್ದಿದೆ. ಹಾಗಾದರೆ ಅವರೂ ವಾಮಮಾರ್ಗ ಅನುಸರಿಸಿ ಗೆದ್ದಿದ್ದಾರೆಯೇ? ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ವಾಮಮಾರ್ಗದಿಂದಲೇ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿದಿದೆ ಎಂದು ಹೇಳಿದರೆ ಅವರು ಒಪ್ಪಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

ಮಂಡ್ಯಕ್ಕೆ ಜೆಡಿಎಸ್ ಕೊಡುಗೆ ಏನು?

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾನು ಇದುವರೆಗೂ ಯಾರ ವಿರುದ್ಧವೂ ತೊಡೆ ತಟ್ಟಿಲ್ಲ, ಲಘುವಾಗಿಯೂ ಮಾತನಾಡಿಲ್ಲ ಎಂದರು.

“ಹಗಲು-ರಾತ್ರಿ ಎನ್ನದೆ ಮಂಡ್ಯ ಜಿಲ್ಲೆಯ ಜನ ನಮ್ಮ ಅಭಿವೃದ್ಧಿಯನ್ನು ನೋಡದೆಯೂ ಜೆಡಿಎಸ್‌ಗೆ ಮತ ಹಾಕುತ್ತಾರೆ. ಆದರೆ, ಪ್ರತಿಯಾಗಿ ಜೆಡಿಎಸ್ ಪಕ್ಷದ ಕೊಡುಗೆ ಈ ಜಿಲ್ಲೆಗೆ ಏನು? ಆ ಪಕ್ಷದ ನಾಯಕರೆನಿಸಿಕೊಂಡವರು ತಮ್ಮ ಕಾರ್ಯಕರ್ತರ ಪರವಾಗಿಯಾದರೂ ನಿಂತಿದ್ದಾರೆಯೇ?” ಎಂದು ಚಲುವರಾಯಸ್ವಾಮಿ ನೇರವಾಗಿಯೇ ಪ್ರಶ್ನಿಸಿದರು.

ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ:  ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

ಬೆಂಗಳೂರಿನ 18 ಕಿ.ಮೀ. ಪ್ರಯಾಣ ಮುಂಬೈನ 120 ಕಿ.ಮೀ.ಗೆ ಸಮವೆಂದ ಬೆಂಗಳೂರಿಗ: ಕಾರು ಬಿಟ್ಟು ಮೆಟ್ರೋ ಹತ್ತಿ ಎಂದ ನೆಟ್ಟಿಗರು

by Shwetha
November 10, 2025
0

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ರಾಜಧಾನಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು, ತನ್ನ ಮತ್ತೊಂದು ಗುರುತಾದ ಸಂಚಾರ ದಟ್ಟಣೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ನಗರದ ಟ್ರಾಫಿಕ್ ಎಂಬುದು...

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

ಕಬ್ಬು ‘ರಾ’ ಸಮರ: ಕರ್ನಾಟಕದಲ್ಲಷ್ಟೇ ಹೋರಾಟವೇಕೆ? ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ – ಕೇಂದ್ರದ ನೇರ ಆರೋಪ

by Shwetha
November 10, 2025
0

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ನೇರ ಕಾರಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ...

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

by Shwetha
November 10, 2025
0

ವಿಜಯನಗರ (ಕೂಡ್ಲಿಗಿ): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿಸಿದೆ....

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಿಎಂ ಅಂಗಳಕ್ಕೆ; ಹಿಂದಿನ ಸರ್ಕಾರದತ್ತ ಬೊಟ್ಟು ಮಾಡಿದ ರಾಮಲಿಂಗಾರೆಡ್ಡಿ

by Shwetha
November 10, 2025
0

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಹುನಿರೀಕ್ಷಿತ ವೇತನ ಪರಿಷ್ಕರಣೆ ವಿಚಾರವು ನನ್ನ ಕೈಯಲ್ಲಿಲ್ಲ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram