ವ್ಯಕ್ತಿಯ ಮೇಲೆ ಹಲ್ಲೆಮಾಡಿ ಆಸ್ಪತ್ರೆಗೆ ಸೇರಿಸಿದ ಆರೋಪಿ
ಬೆಂಗಳೂರು: ವ್ಯಕ್ತಿಯನ್ನು ಡ್ರ್ಯಾಗರ್ ನಿಂದ ಹತ್ಯೆ ಮಾಡಿ, ಬಳಿಕ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿರುವ ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಏ.18 ರಂದು ನಡೆದ ಘಟನೆ ನಡೆದಿದ್ದು, ಮುನಿ ಬಂಧಿತ ಆರೋಪಿ. ಸೂರಿ ಹಲ್ಲೆಗೆ ಒಳಗಾದ ವ್ಯಕ್ತಿ. ತನ್ನನ್ನು ಗುರಾಯಿಸಿದ ಎಂಬ ಕಾರಣಕ್ಕೆ ಡ್ರ್ಯಾಗರ್ನಿಂದ ಇರಿದು ನಂತರ ಆತನನ್ನು ತನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸೇರಿಸಿದ್ದಾನೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೀವ್ರ ಹಲ್ಲೆಗೊಳಗಾಗಿದ್ದ ಸೂರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಡೆದಿದ್ದೇನು:? ಇದೇ ತಿಂಗಳ 18ರಂದು ಸೂರಿ ಹಾಗೂ ನಟರಾಜ್ ಎಂಬುವವರು ಮುನಿ(ಆರೋಪಿ) ಎಂಬುವನನ್ನು ಹೆಗ್ಗನಹಳ್ಳಿ ಬಳಿ ಗುರಾಯಿಸಿದ್ದರಂತೆ. ತನ್ನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಅವರ ಬಳಿ ಇದ್ದ ಡ್ರ್ಯಾಗರ್ ಅನ್ನೇ ಕಿತ್ತುಕೊಂಡು ಸೂರಿ ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿದಿದ್ದಾನೆ.
ಬಳಿಕ ತೀವ್ರ ಗಾಯಗೊಂಡು ಬಳಲುತ್ತಿದ್ದ ಸೂರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದ. ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.