ತೆಲಂಗಾಣದಲ್ಲೊಂದು ದಾರುಣ ಘಟನೆ –ವಾಹನ ಸಿಗದೇ ಹೆಗಲ ಮೇಲೆಯೇ ಪತ್ನಿ ಶವ ಹೊತ್ತೊಯ್ದ ಭಿಕ್ಷುಕ..!
ತೆಲಂಗಾಣ : ತೆಲಂಗಾಣದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಭಿಕ್ಷುಕನೊಬ್ಬ ತನ್ನ ಪತ್ನಿಯ ಶವ ಸಾಗಾಟಕ್ಕೆ ವಾಹನ ಸಿಗದೇ ಪಡಬಾರದ ಪಾಡು ಪಟ್ಟಿದ್ದಾನೆ. ತನ್ನ ಮೃತ ಪತ್ನಿಯ ಶವವನ್ನ ತನ್ನ ಹೆಗಲ ಮೇಲೆ ಹೊತ್ತು ಸ್ಮಸಾಣಕ್ಕೆ ಸಾಗಿದ್ದು, ಈ ಕುರಿತಾದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗ್ತಿದೆ.
ನೆಟ್ಟಿಗರು ಈ ಫೋಟೋಗಳನ್ನ ನೋಡಿ ಮರುಕ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಕಾಮರೆಡ್ಡಿಯಲ್ಲಿ , ರೈಲ್ವೆ ನಿಲ್ದಾಣದಲ್ಲಿ ಈ ಜೋಡಿ ವಾಸವಾಗಿತ್ತು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ನಾಗಲಕ್ಷ್ಮೀ ದೀರ್ಘ ಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಆಕೆಯ ಶವ ಸಾಗಾಟಕ್ಕೆ ವಾಹನ ಸಿಗದೇ ಪತಿ ಸ್ವಾಮಿ ಪಾಡುಬಿದ್ದಿದ್ಧಾರೆ.
ರೈಲ್ವೆ ಪೊಲೀಸ್ ಅಧಿಕಾರಿಗಳು ಸ್ವಾಮಿಗೆ 2500 ರೂಪಾಯಿಗಳನ್ನ ಅಂತ್ಯಕ್ರಿಯೆಗೆಂದು ನೀಡಿದ್ದರು. ಆದರೆ ಶವವನ್ನ ಸಾಗಿಸಲು ಯಾವುದೇ ಆಟೋವಾಗಲಿ ಇನ್ನಿತರ ಯಾವುದೇ ಖಾಸಗಿ ವಾಹನಗಳು ಸಿಗಲಿಲ್ಲ. ನಾಗಲಕ್ಷ್ಮೀ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಭಾವಿಸಿ ಶವ ಸಾಗಿಸಲು ಎಲ್ಲರೂ ಹಿಂಜರಿದಿದ್ದಾರೆ.
ಸಾಕಷ್ಟು ಸಮಯಗಳವರೆಗೆ ಕಾದ ಸ್ವಾಮಿ ತನ್ನ ಪತ್ನಿಯ ಶವವನ್ನ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದಾರೆ. ಈ ದಾರುಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವ್ಯವಸ್ಥೆಯ ಆಗರವಾಗಿದೆ ಕೋಲಾರ ಕೋವಿಡ್ ಜಿಲ್ಲಾಸ್ಪತ್ರೆ