ಅತ್ತೆ ನಾದಿನಿಯನ್ನ ಕೊಂದ ಈತನಿಗೆ ಸದ್ದಾಂ ಹುಸೇನ್ ಸ್ಪೂರ್ತಿಯಂತೆ..!
ನವದೆಹಲಿ: ಭಯಾನಕ ಥಾಲಿಯಂ ಸ್ಲೋ ಪಾಯಿಸನ್ ಅನ್ನ ತನ್ನ ಅತ್ತೆ ಹಾಗೂ ನಾದಿನಿಗೆ ಕೊಟ್ಟು ಅವರನ್ನ ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಈತನಿಗೆ ಇರಾಕ್ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ ಸ್ಪೂರ್ತಿಯಾಗಿದ್ದನಂತೆ.
ಹೌದು 37 ವರ್ಷದ ವರುಣ್ ಅರೋರಾ ಎಂಬಾತ ವೈರಿಗಳನ್ನ ಕೊಲ್ಲಲು ಸದ್ದಾಂ ಹುಸೇನ್ ಅನುಸರಿಸಿದ್ದ ವಿಧಾನವನ್ನ ಪಾಲೋ ಮಾಡಿದ್ದಾನೆ. ಅದ್ರಂತೆ ತನ್ನ ಅತ್ತೆ ನಾದಿನಿಯ ಖೇಲ್ ಖತಮ್ ಮಾಡಿದ್ದಾನೆ. ಥಾಲಿಯಂ ತಿನ್ನುತ್ತಾ ಇದ್ದರೆ ಮನುಷ್ಯರು ವಿಚಿತ್ರ ಕಾಯಿಲೆಗೆ ತುತ್ತಾಗಿ ಸಾವನಪ್ಪುತ್ತಾರೆ.
ವರುಣ್ ಅತ್ತೆ ಅನಿತಾ ಹಾಗೂ ನಾದಿನಿ ಪ್ರಿಯಾಂಕಾಳನ್ನ ಕೊಲೆ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. ತನಗೆ ಅತ್ತೆ ಮನೆಯಲ್ಲಿ ಹೆಂಡತಿ, ಅತ್ತೆ, ನಾದಿನಿ ಹಾಗೂ ಆಕೆಯ ಗಂಡ ಸೇರಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಅವರನ್ನ ಕೊಲ್ಲುವ ಪ್ಲಾನ್ ಮಾಡಿದ್ದ ವರುಣ ಸದ್ದಾಂ ಹುಸೇನ್ ರ ಪ್ಲಾನ್ ಫಾಲೋ ಮಾಡಿದ್ದಾನೆ.
ಪಿಶ್ ಕರಿಯಲ್ಲಿ ಥಾಲಿಯಂ ಬೆರೆಸಿ ಕುಟುಂಬದವರಿಗೆ ಊಟ ನೀಡಿದ್ದಾನೆ. ಅದನ್ನು ತಿಂದಿದ್ದ ಕುಟುಂಬದವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಆದ್ರೆ ಇವರ ಪೈಕಿ ಅತ್ತೆ ಹಾಗೂ ನಾದಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನೂ ಹೆಂಡತಿ ದಿವ್ಯಾ ಹಾಗೂ ಮಾವ ದೇವೆಂದ್ರ ಮೋಹನ್ ಅವರ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೂ ವೈದ್ಯರು ನೀಡಿದ್ದ ರಿಪೋರ್ಟ್ ಮೇರೆಗೆ ಸಂಶಯ ವ್ಯಕ್ತಪಡಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
BIGGBOSS 8 : ದೊಡ್ಮನೆಯಲ್ಲಿ ವಿಶ್ವನ ದರ್ಬಾರ್ ಶುರು.! ಕುದುರೆ ಅಂದ್ರೆ ಅಶ್ವ… ಕ್ಯಾಪ್ಟನ್ ಅಂದ್ರೆ ವಿಶ್ವ..!
NETFLIX , AMAZON ಸೇರಿ ಹಲವು ಒಟಿಟಿಗಳ ಮೇಲಿನ ಬಾಕಿ ಕೇಸ್ ಗಳಿಗೆ ತಡೆ ನೀಡಿದ ಸುಪ್ರೀಂ..!
RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?