24 ಸಾವಿರ ಸಾಲ ತೀರಸಲಾಗದೆ ಯುವಕ ಆತ್ಮಹತ್ಯೆ
ಮಂಗಳೂರು: ಸಾಲ ತೀರಿಸಲಾಗದೆ ಯುವಕನೋರ್ವ ಡೆತ್ ನೋಟ್ ಬೆರದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
20 ವರ್ಷದ ಕಾಟೀಪಳ್ಳ ನಿವಾಸಿ ಲಾರೆನ್ಸ್ ಡಿ ಸೋಜ ಆತ್ಹತ್ಯೆ ಮಾಡಿಕೊಂಡ ಯುವಕ. ಈತ 24 ಸಾವಿರ ರೂ ಸಾಲವನ್ನು ತಿರಸಬೇಕಿತು. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಯುವಕ ಮದ್ಯ ವೆಸನಿಯಾಗಿದ್ದು, ಕುಡಿತಕ್ಕೆ ಗೆಳೆಯರಲ್ಲಿ ಸಾಲ ಮಾಡಿಕೊಂಡಿದ್ದ, ಎನ್ನಲಾಗಿದೆ. ಕೆಲಸಕ್ಕೆ ರಜೆ ಹಾಕಿದ್ದ ಯುವಕ ನಿನ್ನೆ ಸುಮಾರು 11.30 ಕ್ಕೆ ಮನೆಯಿಂದ ಹೊರಟು ಹೋಗಿದ್ದ. ಬಳಿಕ ಎಲ್ಲೆಡೆ ಹುಡುಕಾಡಿದಾಗ ನಿನ್ನೆ ಸಂಜೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮಲ್ಲಮಾರ್ ಬೀಚ್ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.
ಈತ ತನ್ನ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನಾನು ಹಲವರಿಗೆ ಹಣ ಕೊಡಲು ಬಾಕಿ ಇದೆ. ಅಮ್ಮನ ಬಂಗಾರ ಅಡವಿಟ್ಟು ತಂದ ಹಣವು ಖರ್ಚಾಯಿತು. ಹರ್ಷಿತ್ 6 ಸಾವಿರ, ಶರೊಲಿನ್ ಡಿಸೋಜ 3 ಸಾವಿರ, ಸುಧಾಕರ್ 3 ಸಾವಿರ, ಅಮ್ಮ ನಿಗೆ ( ಬಂಗಾರದ ಹಣ) 12 ಸಾವಿರ ನೀಡಬೇಕಿತ್ತು. ಸಾರಿ ಅಮ್ಮ ಮತ್ತು ಕುಟುಂಬಿಕರಿಗೆ ಎಂದು ಬರೆಯಲಾಗಿದೆ.