ಮತ್ತೆ ಬಣ್ಣ ಹಚ್ಚಲಿದ್ದಾರೆ ಮೇಘನಾ ರಾಜ್..!
ನಟ ಚಿರು ನಿಧನದ ಬಳಿಕ ನಟನೆಯಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ ಇದೀಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.
ನಾಳೆ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೇಘನಾ ರಾಜ್ ಅವರು ನಟಿಸಲಿರುವ ಹೊಸ ಸಿನಿಮಾ ಸೆಟ್ಟೇರಲಿದೆ.
ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಅವರು ಸಂಪೂರ್ಣವಾಗಿ ಬಣ್ಣದ ಬದುಕಿಗೆ ದೂರವಾಗಿದ್ದರು.
ಕತ್ತಲಾಗಿದ್ದ ಅವರ ಬಾಳಿಗೆ ಹೊಸ ಭರವಸೆ ಮೂಡಿದ್ದು, ಮಗ ರಾಯನ್ ರಾಜ್ ಸರ್ಜಾ.
ಕೆಲ ದಿನಗಳ ಹಿಂದಷ್ಟೆ ಮಗನ ನಾಮಕರಣ ಮಾಡಿದ್ದ ಮೇಘನಾ ರಾಜ್, ಇದೀಗ ಚಿರು ಬರ್ತ್ ಡೇ ದಿನದ ಅಂಗವಾಗಿ ತಮ್ಮ ಮತ್ತು ಚಿರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ.
ಹೌದು..! ಮೇಘನಾ ರಾಜ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಸಿನಿಮಾ ನಾಳೆ ಖಾಸಗಿ ಹೋಟೆಲ್ ನಲ್ಲಿ ಸೆಟ್ಟೇರಲಿದೆ.
ಪಿ.ಬಿ.ಸ್ಟುಡಿಯೋಸ್ ಲಾಂಛನದಲ್ಲಿ ಮೂಡಿಬರಲಿರುವ ಈ ಸಿನಿಮಾವನ್ನು ಹೊಸ ನಿರ್ದೇಶಕ ವಿಶಾಲ್ ನಿರ್ದೇಶನ ಮಾಡಲಿದ್ದಾರೆ.
ಈ ಚಿತ್ರವನ್ನು ಪನ್ನಗಾಭರಣ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೈ ಜೋಡಿಸುತ್ತಿದ್ದಾರೆ. ನಾಳೆ ಖಾಸಗಿ ಹೋಟೆಲ್ ನಲ್ಲಿ ಸಿನಿಮಾ ಸೆಟ್ಟೇರುತ್ತಿದೆ.