ಕಥೆ ಕೇಳಲು ನಾನು ಬಂದಿಲ್ಲ : ಸಚಿವ ಕೆ.ಸಿ.ನಾರಾಯಣ್ ಗೌಡ ತರಾಟೆ Minister KC Narayana Gowda meeting saaksha tv
ಮಂಡ್ಯ : ಸುಳ್ಳು ಹೇಳುವುದನ್ನ ಬೀಡಿ. ಸುಳ್ಳು ಮಾಹಿತಿ ನೀಡಬೇಡಿ. ಸರಿಯಾದ ಮಾಹಿತಿ ನೀಡಿ, ನಿಮ್ಮ ಕಥೆ ಕೇಳಲು ಬಂದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೆ.ಸಿ.ನಾರಾಯಣಗೌಡ ತರಾಟೆ ತೆಗೆದುಕೊಂಡಿದ್ದಾರೆ.
ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಕೋವಿಡ್ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು.
ಈ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವ ಕೆ.ಸಿ.ನಾರಾಯಣಗೌಡ,ಅಧಿಕಾರಿಗಳು ಸುಳ್ಳು ಹೇಳುವುದನ್ನ ಬಿಡಬೇಕು.
ಸರಿಯಾಗಿ ಗೊತ್ತಿಲ್ಲದೆ, ಸುಳ್ಳು ಮಾಹಿತಿ ನೀಡಬೇಡಿ. ಸರಿಯಾಗಿ ಮಾಹಿತಿ ನೀಡಿ ಕಥೆ ಕೇಳಲು ನಾನು ಬಂದಿಲ್ಲಎಂದು ಕಿಡಿಕಾರಿದರು.