ಯಾವನೋ ಅವ್ನು ಬೋ*** : ನೀರು ಕೇಳಿದವರಿಗೆ ಮಾಧುಸ್ವಾಮಿ ಅವಾಚ್ಯ ಶಬ್ಧ ಬಳಕೆ
ತುಮಕೂರು : ನೀರಿನ ಸಮಸ್ಯೆಗೆ ಪರಿಹಾರಕ್ಕಾಗಿ ಆಗ್ರಹಿಸಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ಕಾನೂನು ಸಚಿವ ಮಾಧುಸ್ವಾಮಿ ಮನಬಂದಂತೆ ಅವಾಚ್ಯ ಪದಪ್ರಯೋಗ ಬಳಸಿ ನಿಂದಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವದ ವಿಡಿಯೋ ಇದಾಗಿದ್ದು, ಈಗ ಭಾರಿ ವೈರಲ್ ಆಗುತ್ತಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾ.ಪಂ. ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು.
ಶೇಷೇನಹಳ್ಳಿ ಕೆರೆ ಮತ್ತು ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಬೇಡಿಕೆ ಮುಂದಿರಿಸಿ ಅವರು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರು.
ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಬಗ್ಗೆ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಮಾಧುಸ್ವಾಮಿ, “ಜನರ ಮತದಾನದ ಹಕ್ಕನ್ನು ಹಾಳು ಮಾಡಬೇಡಿ.
ನೀರು ಬಿಡ್ಸ್ರಯ್ಯಾ, ಅದ್ಯಾರ್ ಕೈಲಿ ಬಿಡಿಸ್ತೀರಾ ನಾನು ನೋಡ್ತೀನಿ. ಇಲ್ಲೊಬ್ಬ ಎಂಎಲ್ ಎ ಇದ್ದಾರೆ ಅಂತಾ ಕೇಳಿದಿರೇನ್ರಿ..? ಬಂದ್ ಒಂದ್ ಮಾತ್ ಕೇಳಿದಿರೇನ್ರಿ..?
ನೀರಿನ ಸಮಸ್ಯೆ ಇಲ್ಲಿ ಕೇಳಲ್ಲ ಅಂದಾಗ ಸ್ಟ್ರೈಕ್ ಮಾಡೋದ್ ಒಂದ್ ಗೌರವ..? ಅರ್ಜಿ ಕೊಟ್ಟು ಕೇಳಿ ನಾವೆಲ್ಲಾ ಇಲ್ಲ ಅಂದಾಗ ನೀವು ಹೇಳಬೇಕು.
ಚುನಾವಣೆ ಬಾಯ್ಕಾಟ್ ಮಾಡೋವಂಥದ್ದೇನು. ಚುನಾವಣೆ ಬೈಕಾಟ್ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಎಲ್ಲ ಘಟನಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel