MissionDakshin ಎಂದರೆ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ
ಬೆಂಗಳೂರು : ಮಿಷನ್ ದಕ್ಷಿಣ್ ಎಂದರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ ಎಂದು ರಾಜ್ಯ ಬಿಜೆಪಿ ಬರೆದುಕೊಂಡಿದೆ.
ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿದೆ. ಇವರ ಜೊತೆ ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಕಥೆಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಪ್ರತಿಭೆ ಹಾಗೂ ಅರ್ಹತೆಯನ್ನೇ ಮೋದಿ ಸರ್ಕಾರ ಮಾನದಂಡವಾಗಿ ಪರಿಗಣಿಸುತ್ತದೆ ಎಂಬುದಕ್ಕೆ ರಾಜ್ಯ ಸಭಾ ನಾಮನಿರ್ದೇಶಿತರೇ ಸಾಕ್ಷಿಯಾಗಿದ್ದಾರೆ.ರಾಷ್ಟ್ರದ ಕೀರ್ತಿ ಎತ್ತಿ ಹಿಡಿಯುವುದರಲ್ಲಿ ದಕ್ಷಿಣದ ರಾಜ್ಯಗಳ ಈ ಪ್ರತಿಯೊಂದು ‘ಪ್ರತಿಭಾ ವಜ್ರ’ ಗಳ ಕೊಡುಗೆ ಅಪಾರ.
ಮಿಷನ್ ದಕ್ಷಿಣ್ ಎಂದರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ.
ದಕ್ಷಿಣದ ರಾಜ್ಯಗಳ ಭಾಷಾ ಅಸ್ಮಿತೆ, ಸಾಧನೆ, ಜ್ಞಾನ ಭಂಡಾರ, ಅಭಿವೃದ್ಧಿ ಎಲ್ಲದಕ್ಕೂ ಗೌರವ ನೀಡುವುದಾಗಿದೆ.#MissionDakshin
— BJP Karnataka (@BJP4Karnataka) July 7, 2022
ಮಿಷನ್ ದಕ್ಷಿಣ್ ಎಂದರೆ ಕೇವಲ ಅಧಿಕಾರ ಹಿಡಿಯುವ ರಾಜಕೀಯ ತಂತ್ರಗಾರಿಕೆಯಲ್ಲ.ದಕ್ಷಿಣದ ರಾಜ್ಯಗಳ ಭಾಷಾ ಅಸ್ಮಿತೆ, ಸಾಧನೆ, ಜ್ಞಾನ ಭಂಡಾರ, ಅಭಿವೃದ್ಧಿ ಎಲ್ಲದಕ್ಕೂ ಗೌರವ ನೀಡುವುದಾಗಿದೆ.
ಭಾರತ ರತ್ನ ಸೇರಿದಂತೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಒಂದು ಕುಟುಂಬ ಹಾಗೂ ಆ ಕುಟುಂಬದ ಗುಣಗಾನ ಮಾಡುತ್ತಿದ್ದವರಿಗೆ ನೀಡುತ್ತಿದ್ದ ಕಾಲದ ಯುಗಾಂತ್ಯವಾಗಿದೆ.ಮೋದಿ ಯುಗದಲ್ಲಿ ಅರ್ಹರಿಗೆ ಮಾತ್ರ ಆದ್ಯತೆ. ರಾಜ್ಯಸಭಾ ನಾಮನಿರ್ದೇಶಿತಗೊಂಡ ಸದಸ್ಯರ ಸಾಧನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬರೆದುಕೊಂಡಿದೆ.