MLC ಎಲೆಕ್ಷನ್ ಮೂಲಕ ಸೂರಜ್ ರೇವಣ್ಣ ರಾಜಕೀಯಕ್ಕೆ ಎಂಟ್ರೀ ?
ಜೆಡಿಎಸ್ ನ ಭದ್ರಕೋಟೆ ತವರು ಕ್ಷೇತ್ರ ಹಾಸನ ವಿದಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಯುವ ನಾಯಕ ಸೂರಜ್ ರೇವಣ್ಣ ಹೆಸರು ರೇಸ್ ನಲ್ಲಿ ಮುಂಚೂಣಿಯಲ್ಲಿದೆ.
ನಿನ್ನೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬಹುತೇಕರು ಭವಾನಿ ರೇವಣ್ಣ ಅವರು ಸ್ಪರ್ಧಿಸಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬೇಲೂರು ಶಾಸಕ ಲಿಂಗೇಶ್, ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತ್ರ ದೇವೇಗೌಡರು ಯಾರನ್ನೇ ನಿಲ್ಲಿಸಿದ್ರು ನನ್ನ ಸಹಮತ ಎಂದರು.
ರೇವಣ್ಣ ಅವರ ಕಿರಿಯ ಪುತ್ರ ಸೂರಜ್ ರೇವಣ್ಣ ಈ ಭಾರಿ ವಿಧಾನ ಪರಿಷತ್ ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಹೆಚ್ಚಾಗಿತ್ತಿದೆ. ಯಾರೇ ವಿಧಾನ ಪರಿಷತ್ ಚುನಾವಣೆಗೆ ನಿಂತರೂ ಕೊನೆಯಲ್ಲಿ ದೇವೇಗೌಡರ ಸಮ್ಮತಿ ರಾಜಕೀಯ ಲೆಕ್ಕಾಚಾರವೇ ಅಂತಿಮವಾಗಲಿದೆ