ಎಸಿಬಿ ದಾಳಿ : ಪೈಪ್ ನಲ್ಲೆಲ್ಲಾ ದುಡ್ಡೋ ದುಡ್ಡು money saaksha tv
ಕಲಬುರಗಿ : ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಾಂತಗೌಡ ಬಿರಾದರ್ ಎಂಬುವರ ಮನೆ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಂತೆ ಕಂತೆ ನೋಟಿನ ಹಣ ಪತ್ತೆಯಾಗಿದೆ.
ಇಂದು ಮುಂಜಾನೆಯೇ ಎಸಿಬಿ ದಾಳಿ ನಡೆದಿದ್ದರೂ ಈಗಲೂ ಶಾಂತಗೌಡ ಅವರ ಮನೆ, ಕಚೇರಿ, ತೋಟದ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ.
ಇಲ್ಲಿ ಆಸಕ್ತಿಕರ ಸಂಗತಿ ಏನಂದ್ರೇ ಎಸಿಬಿ ದಾಳಿ ವಿಷಯ ತಿಳಿಯುತ್ತಿದ್ದಂತೆ ಶಾಂತಗೌಡ, ಮನೆಯಲ್ಲಿದ್ದ ಹಣವನ್ನು ಪೈಪ್ ನಲ್ಲಿ ಬಿಸಾಕಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಪ್ಲಂಬರ್ ರನ್ನು ಕರೆಯಿಸಿ ಪೈಪ್ ಕಟ್ ಮಾಡಿಸಿ ಹಣ ಹುಡುಕುತ್ತಿದ್ದಾರೆ. ಈ ವೇಳೆ 40 ಲಕ್ಷಕ್ಕೂ ಅಧಿಕ ಹಣ ದೊರೆತಿದೆ ಎಂದು ತಿಳಿದು ಬಂದಿದೆ.
ಪೈಪ್ ಗಳಲ್ಲಿ ಹಣ ಸಿಗುತ್ತಿದ್ದಂತೆ ಅಧಿಕಾರಿಗಳು ಶಾಂತಗೌಡ ಅವರ ಮನೆಯ ಮೂಲೆ ಮೂಲೆಗಳನ್ನು ಹುಡುಕುತ್ತಿದ್ದಾರೆ.
ಸಿಕ್ಕ ಹಣವನ್ನು ಅಧಿಕಾರಿಗಳು ಬಕೆಟ್ ನಲ್ಲಿ ತುಂಬಿಡುತ್ತಿದ್ದಾರೆ. ಬಕೆಟ್ 500 ರೂ. ನೋಟಿನಿಂದಲೇ ತುಂಬಿದೆ.