ಕೋವಿಡ್ ನಿಯಮ ಉಲ್ಲಂಘನೆ – ಹೊನ್ನಳ್ಳಿ ಶಾಸಕರಿಂದ ಹೋರಿ ಬೆದರಿಸುವ ಸ್ಪರ್ದೆ
ಕೋವಿಡ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಹೊನ್ನಳ್ಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. . ಸ್ವತಃ ಶಾಸಕರಾಗಿ ಕೋವಿಡ್ ನಿಯಮಗಳನ್ನ ಉಲ್ಲಂಘಿಸಿದ್ದಕ್ಕೆ ಜನರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಹೊನ್ನಾಳ್ಳಿ ತಾಲೋಕಿನ ಬಲಮುರಿ ಗ್ರಾಮದಲ್ಲಿ ದುರ್ಗಾಂಭಿಕ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.
ಆಡಳಿತ ಪಕ್ಷದ ಶಾಸಕರಾಗಿ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಜಾತ್ರೆಯಲ್ಲಿ ಭಾಗವಹಿಸಿರುವ ವೀಡಿಯೋಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ನಂತರ ಎಚ್ಚೆತ್ತುಕೊಂಡ ಶಾಸಕರು ಕ್ಷಮೆ ಕೇಳಿದ್ದಾರೆ.
“ಬಲಮುರಿ ಗ್ರಾಮದ ಜನರು ನನ್ನನ್ನು ಪ್ರೀತಿಯಿಂದ ಹೋರಿ ಬೆದರಿಸುವ ಹಬ್ಬಕ್ಕೆ ಆಹ್ವಾನಿಸಿ ದಾಗ ಅವರ ಪ್ರೀತಿಗೆ ಸೋತು ಹೋಗಿದ್ದೆ. ಆದರೆ ಅಲ್ಲಿ ಹೆಚ್ಚಿನ ಜನಸಂಖ್ಯೆ ಸೇರಿದ ಪರಿಣಾಮ ಕೊವಿಡ್ ಮಾರ್ಗಸೂಚಿಗಳನ್ನು ನಾವು ಪಾಲಿಸುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳುವೆ. ಈ ಅಚಾತುರ್ಯಕ್ಕೆ ವಿಷಾದಿಸುವೆ. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಕ್ಕೆ ಅವಕಾಶ ನೀಡದೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ ಎಲ್ಲರೂ ಒಗ್ಗಟ್ಟಿನಿಂದ ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ಮಾಡೋಣ!” ಎಂದು ಟ್ವಿಟ್ ಮಾಡಿದ್ದಾರೆ.
Powerful People come from Powerful places.
ಜನಪ್ರಿಯ ನಾಯಕ ಶ್ರೀ @MPRBJP ಅವರು ಹೊನ್ನಾಳಿಯ ಬಲಮುರಿ ಗ್ರಾಮದಲ್ಲಿ ನಡೆದ ಬಾರಿ ಹೋರಿ ಬೆದರಿಸುವ ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು. pic.twitter.com/9ITNrf4hBk
— Santhosh 🇮🇳 (@Santhushimoga) January 10, 2022