ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ‘ಜೈಷ್ ಉಲ್ ಹಿಂದ್’ ಸಂಘಟನೆ ಕೈವಾಡದ ಸುದ್ದಿ ಸುಳ್ಳು..!
ಮುಂಬೈ: ಇತ್ತೀಚೆಗೆ ಏಷ್ಯಾದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ರಿಲಯನ್ಸ್ ಕಂಪನಿಯ ಒಡೆಯ ಮುಕೇಶ್ ಅಂಬಾನಿ ಮನೆಯ ಮುಂದೆ ಕಾರೊಂದರಲ್ಲಿ ಸ್ಫೋಟಕಗಳು ಪತ್ತೆಯಾಗಿತ್ತು. ಅಲ್ಲದೇ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ಇದು ಟ್ರೈಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಎನ್ನು ಸಂದೇಶ ನೀಡುವ ಮೂಲಕ ದೊಡ್ಡ ಅನಾಹುತದ ಸುಳಿವು ನೀಡಲಾಗಿತ್ತು. ಆದ್ರೆ ಈ ಕೆಲಸದ ಹಿಂದೆ ‘ಜೈಷ್ ಉಲ್ ಹಿಂದ್’ ಸಂಘಟನೆಯ ಕೈವಾಡವಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ ವ್ಯಕ್ತಿ ಸಾವು
ಈ ಬಗ್ಗೆ ಸ್ವತಃ ಇದೇ ಸಂಘಟನೆಯೇ ಹೊಣೆ ಹೊತ್ತಿದೆ ಎಂಬ ಸುದ್ದಿಯೂ ವೈರಲ್ ಆಗಿತ್ತು. ಆದ್ರೆ ‘ಜೈಷ್ ಉಲ್ ಹಿಂದ್’ ಹೆಸರಿನಲ್ಲಿ ಬರೆದಿದ್ದ ಈ ಪತ್ರ ನಕಲಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಹೌದು ಈ ಬಗ್ಗೆ ತನಿಖೆ ನಡೆಸಿದ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಪತ್ರದಲ್ಲಿ ನಮೂದಿಸಲಾಗಿದ್ದ ಲಿಂಕ್ ನಿಂದ ಯಾವುದೇ ವೆಬ್ ಪೇಜ್ ಪತ್ತೆಯಾಗಲಿಲ್ಲ. ಇದು ನಕಲಿ ಪತ್ರ ಎಂದು ತಿಳಿಸಿದ್ದಾರೆ. ಇತ್ತ ಮುಮಜಾಗ್ರತಾ ಕ್ರಮವಾಗಿ ಅಂಬಾನಿ ಮನೆರ ಎದುರು ಸೆಕ್ಯುರಿಟಿ ಟೈಟ್ ಮಾಡಲಾಗಿದೆ.
ಎಂಜಿನಿಯರಿಂಗ್ ಫ್ರೆಶರ್ ಗಳಿಗೆ ಗುಡ್ ನ್ಯೂಸ್ : ಪೇಪಾಲ್ ಸೇರಲು ಸುವರ್ಣಾವಕಾಶ