ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದ್ರು : ಹೆಚ್.ವಿಶ್ವನಾಥ್
ಚಿತ್ರದುರ್ಗ : ಯಾರಿಗೆ ಗಟ್ಟಿ ದ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು. ಆದರೆ, ನಾನು ಒಂಟಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಹೆಚ್ ವಿಶ್ವನಾಥ್ ಜೊತೆ ಬಿಜೆಪಿ ಸೇರಿದ ಎಲ್ಲರು ಈಗ ಒಂದಲ್ಲಾ ಒಂದು ರೀತಿ ಸಚಿವರಾಗಿದ್ದಾರೆ. ಆದ್ರೆ ಹಳ್ಳಿಹಕ್ಕಿ ಖ್ಯಾತಿಯ ಹೆಚ್ ವಿಶ್ವನಾಥ್ ಇದೀಗ ಒಂಟಿ ಹಕ್ಕಿಯಾಗಿದ್ದಾರೆ.
ಅಂದು ವಿಶ್ವನಾಥ್ ಜೊತೆ ಇದ್ದವರು ಈಗ ಅವರದ್ದೇ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಯಾರಿಗೆ ಗಟ್ಟಿ ದ್ವನಿ ಇರುತ್ತೋ ಅವನು ಒಂಟಿ ಆಗುತ್ತಾನೆ.
ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋಗಿದ್ದಾರೆ. ಆದ್ರೆ ನಾನು ಒಂಟಿ ಅಲ್ಲ. ರಾಜ್ಯದ ಜನ ನನ್ನ ಜೊತೆಗಿದ್ದಾರೆ. ನನ್ನ 17 ಜನ ಸ್ನೇಹಿತರು ಬಿಡಿ, ಮಂತ್ರಿ ಆಗುತ್ತಾರೆ.
ಅಷ್ಟಕ್ಕೆ ಸಿಮೀತ. ಆದರೆ ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತ ಬಂದವನು ಎಂದು ಸ್ನೇಹಿತರಿಗೆ ಟಾಂಗ್ ನೀಡಿದರು.
ಇದೇ ವೇಳೆ ಮಂತ್ರಿಸ್ಥಾನದ ಬಗ್ಗೆ ಮಾತನಾಡಿ, ಮಂತ್ರಿಗಿರಿ ಸಿಗುತ್ತೋ ಬಿಡುತ್ತೋ ರಾಜ್ಯದ ಸಾಕ್ಷಿಪ್ರಜ್ಞೆಯಿಂದ ನಾನು ಸಹ 17 ಜನರ ಟೀಮ್.
ನಾನೇ ಟೀಮ್ ಮುನ್ನೆಡೆಸಿದ್ದೇನೆ ಎಂದ ವಿಶ್ವನಾಥ್, ಗಟ್ಟಿಧ್ವನಿ ರಾಜ್ಯದಲ್ಲಿ ಪ್ರತಿಧ್ವನಿಸುತ್ತದೆ, ಹೇಡಿ ಧ್ವನಿ ಅಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel