ಮರದ ಕೆಳಗೆ ವಾಹನ ನಿಲ್ಲಿಸುವ ಮುನ್ನ ಎಚ್ಚರ…!!
ಮೈಸೂರು : ಮರದ ಕೆಳಗಡೆ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಕೊಂಬೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಲ್ಲಿನ ಒಂಟಿಕೊಪ್ಪಲು ಅಂಚೆ ಕಚೇರಿ ಎದುರು ಇರುವ ಲಾಯಲ್ ವಲ್ರ್ಡ್ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಘಟನೆ ನಡೆದಿದೆ.
ಮರದ ನೆರಳಿನಲ್ಲಿ ನಿಲ್ಲಿಸಿದ ಕ್ಷಣ ಮಾತ್ರದಲ್ಲಿ ಕಾರಿನ ಮೇಲೆ ಬೃಹತ್ ಕೊಂಬೆ ಬಿದ್ದಿದ್ದು, ಕಾರು ಬಯಹುತೇಕ ಜಖಂಗೊಂಡಿದೆ.
ಸದ್ಯ ಕಾರನಲ್ಲಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮೂದಲು ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ಯುವಕರಿಬ್ಬರಿಗೆ ಮರದಲ್ಲಿ ಶಬ್ದ ಉಂಟಾಗುತ್ತಿರುವುದನ್ನು ಗಮನಿಸಿ ಪಕ್ಕಕ್ಕೆ ಸರಿದಿದ್ದಾರೆ.
ಈ ನೈಜ ದೃಶ್ಯ ಸಿಸಿ ಕ್ಯಮರಾದಲ್ಲಿ ಸೆರೆಯಾಗಿದ್ದು ಸಾಕಷ್ಟು ವೈರಲ್ ಆಗಿದೆ.