ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ಹಾಗೂ ನಾಗ ಚೈತನ್ಯ ತಮ್ಮ 10 ವರ್ಷಗಳ ಸಂಬಂಧಕ್ಕೆ ಡಿವೋರ್ಸ್ ಮೂಲಕ ಎಳ್ಳು ನೀರು ಬಿಟ್ಟಿದ್ದಾರೆ.. ಈಗ ಇಬ್ಬರೂ ಕೂಡ ತಮ್ಮ ತಮ್ಮ ಕೆಸಸಗಳಲ್ಲಿ ಬ್ಯುಸಿಯಾಗಿದ್ದಾರೆ.. ಇಬ್ರೂ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ತೊಡಗಿದ್ದಾರೆ..
ಡಿವೋರ್ಸ್ ನಂತರ ಅಂದ್ರೆ ಇತ್ತೀಚೆಗೆ ಸಮಂತಾ ಡಿವೋರ್ಸ್ ನಂತರ ತಾವು ಅನುಭವಿಸಿದ ಮಾನಸಿಕ ಸಂಕಷ್ಟ , ತಾವು ಕುಗ್ಗಿ ಮತ್ತೆ ಈಗ ಸಾಮಾನ್ಯ ಜೀವನಕ್ಕೆ ಮರಳಿದ್ದು ಹೇಗೆ ಎಂಬುದರ ಬಗ್ಗೆ ಪೋಸ್ಟ್ ಗಳನ್ನ ಹಾಕುತ್ತಿರುತ್ತಾರೆ..
ಆದ್ರೆ ನಾಗಚೈತನ್ಯ ಮಾತ್ರ ಈ ವರೆಗೂ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ… ಆದ್ರೀಗ ನಾಗ ಚೈತನ್ಯ ಕಡೆಗೂ ಡಿವೋರ್ಸ್ ವಿಚಾರವಾಗಿ ಮೌನ ಮುರಿದಿದ್ದಾರೆ,..
‘ಅಖಂಡ’ ಥ್ಯಾಂಕ್ಯೂ ಮೀಟ್ ನಲ್ಲಿ ಆಂಧ್ರ ದಿಕ್ಕೆಟ್ಟ ರಾಜ್ಯವಾಗಿದೆ ಎಂದ ಬಾಲಯ್ಯ..!
ಹೌದು ಡಿವೋರ್ಸ್ ಪಡೆದು ಸುಮಾರು 3 ತಿಂಗಳ ನಂತರ ಈ ಬಗ್ಗೆ ಮಾತನಾಡಿರೋ ನಾಗಚೈತನ್ಯ ಬಂಗರ್ರಾಜು ಸಿನಿಮಾದ ಪ್ರೊಮೋಷನ್ ನಲ್ಲಿ ಭಾಗಿಯಾಗಿದ್ದ ವೇಳೆ ಈ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ..
ಸ್ಯಾಮ್ ಹಾಗೂ ನಾನು ಬೇರ್ಪಟ್ಟಿರುವುದು ಒಂದೊಳ್ಳೆಯ ನಿರ್ಧಾರವಾಗಿದೆ. ವೈಯಕ್ತಿಕ ನಿರ್ಧಾರಕ್ಕಾಗಿ ನಾವಿಬ್ಬರು ಪರಸ್ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳು ಸಂತೋಷವಾಗಿದ್ದರೆ ನನಗೂ ಅದೇ ಸಂತೋಷ. ವೈಯಕ್ತಿಕವಾಗಿ ಸಂತೋಷವಾಗಿರುವ ವಿಚಾರ ಬಂದಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್ ಆಗುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.