ರಾಷ್ಟ್ರೀಯ ಶಿಕ್ಷಣ ನೀತಿ : ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್
ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ – ಬಿಜೆಪಿ ಟ್ವಿಟ್ಟರ್ ನಲ್ಲಿ ವಾಗ್ಯುದ್ಧ ನಡೆಸುತ್ತಿವೆ.
ಎನ್ ಇ ಪಿ- ನಾಗಪುರ ಎಜ್ಯುಕೇಶನ್ ಪಾಲಿಸಿಯನ್ನು ಸದನದಲ್ಲಿ ಚರ್ಚೆಸಲು ಹಿಂದೇಟು ಹಾಕಿದ ಬಿಜಪಿ ಸರ್ಕಾರ ಪಲಾಯನವಾದ ಅನುಸರಿಸಿದೆ.
ಇಂತಹ ಗಂಭೀರ ವಿಷಯಗಳಲ್ಲಿ ಸಾಕಷ್ಟು ಚರ್ಚೆ, ಮಂಥನ, ವಿಮರ್ಶೆಗಳ ನಂತರವೇ ತೀರ್ಮಾನ ಕೈಗೊಳ್ಳಬೇಕು.
ಆದರೆ ಜಾರಿಗೊಳಿಸುವ ತುರಾತುರಿಯಲ್ಲಿರುವ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ವಿಚಾರದಲ್ಲಿ ಆಟವಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದಕ್ಕೆ ಟಾಂಗ್ ಕೊಟ್ಟಿರುವ ಬಿಜೆಪಿ, ಡಾ. ಕಸ್ತೂರಿ ರಂಗನ್ ಅವರಂತಹ ತಜ್ಞರ ನೇತೃತ್ವದಲ್ಲಿ 5 ವರ್ಷಗಳ ಕಾಲ ಮಂಥನ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ.
ಚರ್ಚೆ ಮಾಡುವುದಕ್ಕೆ ಬಿಜೆಪಿ ಸರ್ಕಾರ ಸಿದ್ಧವಿದೆ. ಆದರೆ ಶಿಕ್ಷಣದ ಹೆಸರಿನಲ್ಲಿ ಒಣ ರಾಜಕೀಯ ಬಿಡಲು ಕಾಂಗ್ರೆಸ್ ಪಕ್ಷ ಸಿದ್ಧವಿದೆಯೇ ಎಂದು ಸವಾಲ್ ಹಾಕಿದೆ.