ಖ್ಯಾತ ಸುದ್ದಿ ನಿರೂಪಕ(News anchor) ರೋಹಿತ್ ಸರ್ದಾನಾ ಕೊರೋನಾ ಸೋಂಕಿಗೆ ಬಲಿ
ನವದೆಹಲಿ: ಕೊರೋನಾ ಸೋಂಕಿನಿಂದ ಸುದ್ದಿ ನಿರೂಪಕ ರೋಹಿತ್ ಸರ್ದಾನಾ ನಿಧನರಾಗಿದ್ದಾರೆ. ದೀರ್ಘಕಾಲದವರೆಗೆ ಝೀ ನ್ಯೂಸ್ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರೋಹಿತ್ ಸರ್ದಾನಾ ಕೊನೆಯ ದಿನದವರೆಗೂ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಅವರ ನಿಧನದ ಬಗ್ಗೆ, ಸುಧೀರ್ ಚೌಧರಿ, “ಈಗ ಸ್ವಲ್ಪ ಮುಂಚಿತವಾಗಿ, ಜಿತೇಂದ್ರ ಶರ್ಮಾ ಅವರಿಗೆ ಕರೆ ಬಂತು. ಅವರು ಹೇಳಿದ್ದನ್ನು ಕೇಳಿ ನನ್ನ ಕೈಗಳು ನಡುಗಿದವು. ನಮ್ಮ ಸ್ನೇಹಿತ ಮತ್ತು ಸಹೋದ್ಯೋಗಿ ರೋಹಿತ್ ಸರ್ದಾನಾ ಅವರ ಸಾವಿನ ವರದಿಗಳಿವೆ. ಇದನ್ನು ನಾನು ಊಹಿಸಿರಲಿಲ್ಲ. ವೈರಸ್ ನಮ್ಮಿಂದ ಎಲ್ಲರನ್ನೂ ದೂರವಿರಿಸುತ್ತದೆ. ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಇದು ದೇವರು ಮಾಡಿದ ಅನ್ಯಾಯ .. ಓಂ ಶಾಂತಿ ” ಎಂದು ಟ್ವೀಟ್ ಮಾಡಿದ್ದಾರೆ.
अब से थोड़ी पहले @capt_ivane का फ़ोन आया।उसने जो कहा सुनकर मेरे हाथ काँपने लगे।हमारे मित्र और सहयोगी रोहित सरदाना की मृत्यु की ख़बर थी।ये वाइरस हमारे इतने क़रीब से किसी को उठा ले जाएगा ये कल्पना नहीं की थी।इसके लिए मैं तैयार नहीं था।ये भगवान की नाइंसाफ़ी है..
ॐ शान्ति— Sudhir Chaudhary (@sudhirchaudhary) April 30, 2021
ಟಿವಿ ಮಾಧ್ಯಮದಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ರೋಹಿತ್ ಸರ್ದಾನಾ ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ ‘ದಂಗಲ್’ ಎಂಬ ಸುದ್ದಿ ಚಾನೆಲ್ ಗೆ ಆ್ಯಂಕರ್ ಆಗಿದ್ದರು. ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು ರೋಹಿತ್ ಸರ್ದಾನ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ.
“ಸ್ನೇಹಿತರೇ, ತುಂಬಾ ದುಃಖದ ಸುದ್ದಿ. ಖ್ಯಾತ ಟಿವಿ ಸುದ್ದಿ ನಿರೂಪಕ ರೋಹಿತ್ ಸರ್ದಾನಾ ನಿಧನ ಹೊಂದಿದ್ದಾರೆ. ಅವರ ಕುಟುಂಬಕ್ಕೆ ತೀವ್ರ ಸಂತಾಪಗಳು” ಎಂದು ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
ದೇಹವು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಲು ಈ ರೀತಿ ಮಾಡಿ#Saakshatv #healthtips #immunity https://t.co/5t5Bbj6Bod
— Saaksha TV (@SaakshaTv) April 26, 2021
ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್#Saakshatv #cookingrecipe #vegetable #friedrice https://t.co/ov1kK94lbw
— Saaksha TV (@SaakshaTv) April 25, 2021
ತೆರೆದು ಓದದ ಆ ಪತ್ರದಲ್ಲಿ ಅಮ್ಮನ ಉಸಿರಿತ್ತು!#ಚೈತ್ರ_ಕಬ್ಬಿನಾಲೆ https://t.co/0WRYp2RVbh
— Saaksha TV (@SaakshaTv) April 28, 2021
ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಗು ಮಿಲಿಯನೇರ್ ಆಗಬಹುದು !#LICPolicy #Moneybackplan https://t.co/RHCYNqFfPr
— Saaksha TV (@SaakshaTv) April 21, 2021
#Newsanchor #RohitSardana