ಜನ ನಿಮ್ಗೆ ಅವಕಾಶ ಕೊಟ್ಟಿದ್ದಾರೆ, ಋಣ ತೀರಿಸಿ : ಸುಮಲತಾಗೆ ನಿಖಿಲ್ ಟಾಂಗ್
ಕೋಲಾರ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅವರ ನಡುವಿನ ವಾಕ್ಸಮರ ತಾರಕ್ಕೇರಿದೆ.
ಈ ವಿಚಾರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಜನ ನಿಮ್ಗೆ ಅವಕಾಶ ಕೊಟ್ಟಿದ್ದಾರೆ, ಋಣ ತೀರಿಸಿ ಎಂದಿದ್ದಾರೆ.
ಕೋಲಾರದ ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ ಆರ್ ಎಸ್ ಡ್ಯಾಂ ವಿವಾದ ಕುರಿತಂತೆ ಸಂಸದರು ಜನರಲ್ಲಿ ಗೊಂಲದ ಸೃಷ್ಠಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.
ಕೆಆರ್ಎಸ್ ಡ್ಯಾಂ ಗೆ ಆದರದ್ದೇ ಆದ ಇತಿಹಾಸ ಇದೆ. ರಾಜರು ತಮ್ಮ ಒಡವೆಗಳನ್ನ ಅಡ ಇಟ್ಟು ಡ್ಯಾಂ ನಿರ್ಮಾಣ ಮಾಡಿದ್ದಾರೆ.
ಅಂತಹ ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಹೇಳಿದ್ರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತೆ. ಜನರಲ್ಲಿ ಗೊಂದಲ ಸೃಷ್ಟಿಸುವ ರೀತಿಯಲ್ಲಿ ಸಂಸದರು ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನು ಚುನಾವಣೆ ಅಂದ ಮೇಲೆ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ನನ್ನ ಸೋಲನ್ನ ನಾನು ಒಪ್ಪಿಕೊಂಡಿದ್ದೇನೆ. ಮಂಡ್ಯದಲ್ಲಿ ಐದು ಮುಕ್ಕಾಲು ಲಕ್ಷ ಜನರು ನನಗೆ ಮತ ಹಾಕಿದ್ದಾರೆ.
ಅದು ಸಣ್ಣ ಸಂಖ್ಯೆ ಅಲ್ಲ, ಬೇಜಾರು ಮಾಡ್ಕೊಳೊ ಅಂತದ್ದು ಏನು ಇಲ್ಲ. ಸಂಸದರಾಗಿ ಮಂಡ್ಯ ಜನ ನಿಮಗೆ ಅವಕಾಶ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.