ಮೈ ಚಳಿಬಿಟ್ಟು ಕೆಲಸ ಮಾಡಿ : ಅಧಿಕಾರಿಗಳಿಗೆ ಶಾಸಕ ನಿರಂಜನ್ ಚಾಟಿ
ಚಾಮರಾಜನಗರ : ಕೊರೊನಾ ಸಂಕಷ್ಟದಲ್ಲಿ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡಬೇಕು ಎಂದು ಶಾಸಕ ನಿರಂಜನ ಚಾಟಿ ಬೀಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ನಡೆದ ಘಟನೆಯಿಂದ ಹೆಚ್ಚೆತ್ತುಕೊಂಡಿರುವ ಶಾಸಕರು, ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಯ ಕೋವಿಢ್ ಸೆಂಟರ್ ಗೆ ಭೇಟಿ ಪರಿಶೀಲನೆ ನಡೆಸಿದರು.
ನಂತರ ತಾಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸಿದರು.
ಈ ವೇಳೆ ಬೆಂಗಳೂರು ,ಮೈಸೂರು ಮತ್ತು ಹೊರ ರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡಬೇಕು.
ಕರೋನ ಪಾಸಿಟಿವ್ ಬಂದವರಿಗೆ ಕೈಗೆ ಸೀಲು ಹಾಕಿ. ಹತ್ತಕ್ಕೂ ಹೆಚ್ಚು ಕರೋನ ಪಾಸಿಟಿವ್ ಬರುವಂತಹ ಬಡಾವಣೆಗಳು ಸೀಲ್ ಡೌನ್ ಮಾಡುವಂತೆ ಶಾಸಕ.ನಿರಂಜನ್ ಕುಮಾರ್ ಸೂಚನೆ ನೀಡಿದರು.
ಮುಖ್ಯವಾಗಿ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಎಚ್ಚರವಹಿಸಬೇಕು. ಪಿಡಿಒಗಳು ಪ್ರತಿನಿತ್ಯ ಹಳ್ಳಿಗೆ ಹೋಗಿ ಸಭೆ ನಡೆಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.