ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಬೆಡ್ ಸಿಗದೇ ರೋಗಿ ಪರದಾಟ chikkaballapur
ಚಿಕ್ಕಬಳ್ಳಾಪುರ : ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಆವರಣದಲ್ಲೇ ನರಳಾಡುತ್ತಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋನಪ್ಪಲ್ಲಿ ನಿವಾಸಿ ಚಾಂದ್ ಪಾಷಾ ಎಂಬುವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಅವರಿಗೆ ಬೆಡ್ ಇದೆ ಬನ್ನಿ ಎಂದು ಕರೆದ್ದ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆ, ಕೊನೆಗೆ ಉಲ್ಟಾ ಹೊಡೆದಿದೆ.
ಇದರಿಂದ ಆತ ಜಿಲ್ಲಾಸ್ಪತ್ರೆಗೆ ಬಂದಿದ್ದು, ಅಲ್ಲಿ ದಾಖಲು ಮಾಡಿಕೊಳ್ಳಲು ಮೀನಾಮೇಷ ಎಣಿಸಿದ್ದಾರೆ.
ಈ ಮಧ್ಯೆ ಸೋಂಕಿತ ರೋಗಿ ಸುಸ್ತಾಗಿ ಆಸ್ಪತ್ರೆ ಬಾಗಿಲಲ್ಲೇ ನರಳಾಡುತ್ತಿದ್ದಾರೆ.
ಬೆಡ್ ಯಾಕೆ ಕೊಡಲ್ಲ ಎಂದು ಪ್ರಶ್ನಿಸಿ ರೋಗಿ ಸಂಬಂದಿಗಳ ಜೊತೆ ಕೋವಿಡ್ ಆಸ್ಪತ್ರೆ ವೈದ್ಯರ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.