ಕೊರೋನಾ ಸಮಯದಲ್ಲಿ ಅಭಿಷೇಕ್ ಬಚ್ಚನ್ ಗೆ ಜವಾಬ್ದಾರಿ ನೆನಪಿಸಿದ ಅಭಿಮಾನಿ
ಅಭಿಷೇಕ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವುದಿಲ್ಲ. ಆದರೆ ಯಾರಾದರೂ ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದಾಗ, ಅವರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾರೆ. ಆದರೆ ಕೆಲ ಸಮಯದಿಂದ ಅಭಿಷೇಕ್ ಬಚ್ಚನ್ ಟ್ರೋಲರ್ಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಮತ್ತೊಮ್ಮೆ ನೆಟ್ಟಿಗರೊಬ್ಬರು ಅಭಿಷೇಕ್ ಗೆ ಅವರ ಜವಾಬ್ದಾರಿಯನ್ನು ನೆನಪಿಸಲು ಪ್ರಯತ್ನಿಸಿದರು ಮತ್ತು ನಟ ಅವರಿಗೆ ಸರಿಯಾದ ಪ್ರತಿಕ್ರಿಯೆ ನೀಡಿದರು.
ವಾಸ್ತವವಾಗಿ, ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲರೂ ಸಾಕಷ್ಟು ಭಯಭೀತರಾಗಿದ್ದಾರೆ ಮತ್ತು ಈ ನಕಾರಾತ್ಮಕ ವಾತಾವರಣದಲ್ಲಿ ಅಭಿಷೇಕ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಒಂದು ಮುದ್ದಾದ ಸಂದೇಶ ನೀಡಿದ್ದರು.
ನಿಮ್ಮೆಲ್ಲರಿಗೂ ನನ್ನ ವರ್ಚುವಲ್ ಹಗ್ . ಈ ಸಮಯದಲ್ಲಿ ಎಲ್ಲರಿಗೂ ಪ್ರೀತಿ ಬೇಕು. ಈ ಸಮಯದಲ್ಲಿ, ಮಾಸ್ಕ್ ಧರಿಸಿ ಎಂದು ಅಭಿಷೇಕ್ ಟ್ವೀಟ್ ಮಾಡಿದ್ದರು. ಅಭಿಷೇಕ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಬಳಕೆದಾರರು, ‘ನೀವು ಹಗ್ ಕಳುಹಿಸುವುದನ್ನು ಬಿಟ್ಟು ಬೇರೆ ಏನಾದರೂ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇವೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಮತ್ತು ಹಾಸಿಗೆಗಳಿಲ್ಲದ ಕಾರಣ ಜನರು ಸಾಯುತ್ತಿದ್ದಾರೆ. ಕೇವಲ ಹಗ್ ನಿಂದ ಏನೂ ಆಗುವುದಿಲ್ಲ ಸರ್ ಎಂದು ಬರೆದಿದ್ದರು.
Wish you did more than just sending hugs!
People are dying without oxygen & beds.
Hugs are just not enough, Sir. https://t.co/CitTxvTeml
— Pooja Mehta (@pooja_news) April 25, 2021
ಬಳಕೆದಾರರ ಈ ಟ್ವೀಟ್ ಗೆ ಅಭಿಷೇಕ್, ‘ಹೌದು, ಮ್ಯಾಮ್. ಈಗ ನಾನು ಸೋಷಿಯಲ್ ಮೀಡಿಯಾದಲ್ಲಿ ಏನನ್ನೂ ಹೇಳುತ್ತಿಲ್ಲ. ಆದರೆ ಇದರ ಅರ್ಥ ನಾವು ಏನನ್ನೂ ಮಾಡುತ್ತಿಲ್ಲ ಎಂದಲ್ಲ. ನಾವೆಲ್ಲರೂ ನಮ್ಮ ಕೈಲಾದಷ್ಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಸಮಯದಲ್ಲಿ, ಪರಿಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ ಪ್ರೀತಿ ಮತ್ತು ಸಕಾರಾತ್ಮಕತೆಯು ಸಹ ಸಹಾಯ ಮಾಡುತ್ತದೆ ಎಂದು ಉತ್ತರಿಸಿದರು.
ಕೆಲವು ದಿನಗಳ ಹಿಂದೆ ಅಭಿಷೇಕ್ ಅವರು ಚಲನಚಿತ್ರರಂಗವನ್ನು ಬಿಡಲು ಚಿಂತನೆ ನಡೆಸಿದ್ದರು.
ಆದರೆ ತಂದೆ ಅಮಿತಾಬ್ ಬಚ್ಚನ್ ನಿಂದಾಗಿ ತಮ್ಮ ಯೋಚನೆಯನ್ನು ಬದಲಾಯಿಸಿಕೊಂಡರು.
ತಂದೆ ಅಮಿತಾಬ್ ಬಳಿ ಹೋಗಿ ‘ಬಹುಶಃ ನಾನು ಚಿತ್ರರಂಗದಲ್ಲಿರಲು ಅನರ್ಹ. ಸಾರ್ವಜನಿಕ ವೇದಿಕೆಯಲ್ಲಿ ವಿಫಲನಾಗುತ್ತಿರುವುದು ನನಗೆ ತುಂಬಾ ಕಷ್ಟವಾಗುತ್ತಿದೆ. ಹಿಂದೆ ಯಾವುದೇ ಸೋಷಿಯಲ್ ಮೀಡಿಯಾ ಇರಲಿಲ್ಲ, ಆದರೆ ಮಾಧ್ಯಮಗಳ ಮೂಲಕ ಜನರು ನನ್ನನ್ನು ನಿಂದಿಸುತ್ತಾರೆ ಮತ್ತು ನನಗೆ ನಟನೆ ಗೊತ್ತಿಲ್ಲ ಎಂದು ಹೇಳುತ್ತಾರೆ. ನಾನು ಚಿತ್ರರಂಗಕ್ಕೆ ಬಂದದ್ದು ನನ್ನ ತಪ್ಪು ಎಂದು ನನಗೆ ಅರಿವಾಗಿದೆ. ಆದರೂ, ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ ಏನೂ ಮಾಡಲು ಆಗುತ್ತಿಲ್ಲ’ ಎಂದು ಅಭಿಷೇಕ್ ಹೇಳಿದ್ದರು.
ಅವರ ಮಾತನ್ನು ಕೇಳಿದ ನಂತರ ಅಮಿತಾಬ್ ಬಚ್ಚನ್, ನೀನು ಸೋತು ಬಿಟ್ಟು ಬಿಡುವ ರೀತಿಯಲ್ಲಿ ನಾನು ನಿನ್ನನ್ನು ಬೆಳೆಸಲಿಲ್ಲ ಎಂದು ಅಭಿಷೇಕ್ ಗೆ ಹೇಳಿದರು. ಪ್ರತಿದಿನ ಬೆಳಿಗ್ಗೆ ಎದ್ದ ಮೇಲೆ ನಾವು ಬದುಕಲು ಹೆಣಗಾಡಬೇಕು. ನಟನಾಗಿ, ನೀನು ಪ್ರತಿ ಚಿತ್ರದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಿ ಎಂದು ಹೇಳಿದರು.
ನಂತರ ಅಮಿತಾಬ್ ಅಭಿಷೇಕ್ ಗೆ ಅವರು ನಟಿಸುವ ಪಾತ್ರಗಳನ್ನು ಮಾತ್ರ ಎತ್ತಿಕೊಂಡು ಆ ಕೆಲಸದ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು. ತಂದೆ ಅಮಿತಾಬ್ ಬಚ್ಚನ್ ಅವರ ಈ ಸಲಹೆ ಅಭಿಷೇಕ್ ಹೃದಯದಲ್ಲಿ ಧೈರ್ಯ ತುಂಬಿತು. ತಂದೆಯ ಮಾತಿನಿಂದ ಬಾಲಿವುಡ್ ತೊರೆಯುವ ಆಲೋಚನೆಯನ್ನು ಅವರು ಮನಸ್ಸಿನಿಂದ ತೆಗೆದುಹಾಕಿದರು.
ಬೇಳೆಕಾಳು ಬೇಯಿಸಿದ ನೀರನ್ನು ಸೇವಿಸುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #lentilwater https://t.co/ijmWsfs9yV
— Saaksha TV (@SaakshaTv) April 21, 2021
ಈರುಳ್ಳಿ ಉತ್ತಪ್ಪಂ#Saakshatv #cookingrecipe #onionuttappam https://t.co/xZGNnVMyRc
— Saaksha TV (@SaakshaTv) April 21, 2021
ಕೊರೋನಾ ಎರಡನೇ ಅಲೆ ಎದುರಿಸುವಲ್ಲಿ ಪ್ರಧಾನಿ ಮೋದಿ ಎಡವಿದ್ದೇಲ್ಲಿ?#Covid19 #secondwave https://t.co/MTzCFvXpTg
— Saaksha TV (@SaakshaTv) April 26, 2021
ಕೊರೋನಾ ಸೋಂಕು ಧೃಡಪಟ್ಟರೆ ಏನು ಮಾಡಬೇಕು? ಇಲ್ಲಿದೆ ಆರೋಗ್ಯ ತಜ್ಞರ ಮಾಹಿತಿ#covidpositive #expertexplains https://t.co/SQKAbn69Dn
— Saaksha TV (@SaakshaTv) April 26, 2021
#coronasecondwave