ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ನೋಡಲು ಆಗದಂತಹ ಸಿಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಇದ್ದರೆ ಮೊದಲು ಬಹಿರಂಗಪಡಿಸಲಿ. ಆನಂತರ ಆ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ವಕ್ತಾರೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಹೆಬ್ಬಾಳಕರ್, ಬಹಳ ದಿನಗಳಿಂದ ಯತ್ನಾಳ್, ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಮೊದಲು ಸಿಡಿ ಬಹಿರಂಗವಾಗಲಿ. ಅದನ್ನು ಎದುರಿಸಲು ಎಲ್ಲರೂ ತಯಾರಾಗಿದ್ದೇವೆ. ಅದರಲ್ಲಿ ತಪ್ಪುಗಳಿದ್ದರೆ ನಮ್ಮ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ವಿಜಯಪುರ ಶಾಸಕರು ಹಲವು ದಿನಗಳಿಂದ ಈ ಸಿಡಿ ವಿಚಾರವನ್ನು ಮಾತನಾಡುತ್ತಲೇ ಇದ್ದಾರೆ. ಇವೆಲ್ಲ ಸುಳ್ಳು. ಸತ್ಯಕ್ಕೆ ದೂರವಾದ ವಿಚಾರ. ಒಂದು ವೇಳೆ ಅವರ ಬಳಿ ಅಂತಹ ಸಿಡಿ ಇದ್ದರೆ ದಯವಿಟ್ಟು ಅದನ್ನು ಬಹಿರಂಗಪಡಿಸಲಿ ಎಂದಿದ್ದಾರೆ.
ಯತ್ನಾಳ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಬಿಜೆಪಿ ಪಕ್ಷವನ್ನು ಮುಜುಗರಕ್ಕೂ ಈಡುಮಾಡಿದೆ. ವಿರೋಧ ಪಕ್ಷ ಕಾಂಗ್ರೆಸ್ಗೂ ಕೂಡ ಯತ್ನಾಳ್ ಸಿಡಿಸಿರುವ ಸಿಡಿ ಬಾಂಬ್ ಹೊಸ ಅಸ್ತ್ರವಾಗಿ ಸಿಕ್ಕಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel