ಒಂದೇ ಕುಟುಂಬದ ಮೂವರು ಆತ್ಮಹತ್ಯೆ chikkamagaluru saaksha tv
ಚಿಕ್ಕಮಗಳೂರು : ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶೃಂಗೇರಿಯ ಮಕ್ಕಿಮನೆಯಲ್ಲಿ ನಡೆದಿದೆ.
70 ವರ್ಷದ ಶಾರದಮ್ಮ, 59 ವರ್ಷದ ವೀಣಾ, 16 ವರ್ಷದ ಶ್ರಾವ್ಯ ಮೃತರಾಗಿದ್ದಾರೆ.
ಮೂವರು ಆತ್ಮಹತ್ಯೆಗೆ ಶರಣಾಗಲು ಕೌಟುಂಬಿಕ ಕಲಹವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಇನ್ನು ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.