ಪಾಕ್ ನಲ್ಲಿ ಹಳೆಯ ಹಿಂದೂ ದೇಗುಲ ಪುನರ್ ನಿರ್ಮಿಸುವಂತೆ ಆದೇಶ Pakistan saaksha tv
ಇಸ್ಲಾಮಾಬಾದ್ : ಉಗ್ರಗಾಮಿಗಳು ಧ್ವಂಸಗೊಳಿಸಿದ್ದ ಹಳೆಯ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸುವಂತೆ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಖೈಬರ್ ಪಖ್ತುನ್ ಖ್ವಾದ ಕರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಶತಮಾನದಷ್ಟು ಹಳೆಯದಾದ ಶ್ರೀ ಶ್ರೀ ಪರಮ ಹನ್ಸ್ ಜಿ ಮಹಾರಾಜ್ ದೇವಸ್ಥಾನವನ್ನು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್(ಜೆಯುಐ-ಎಫ್) ಗೆ ಸೇರಿದ ಕೆಲವು ಸ್ಥಳೀಯ ಧರ್ಮಗುರುಗಳ ನೇತೃತ್ವದ ಗುಂಪೊಂದು ಧ್ವಂಸಗೊಳಿಸಿ ಕೆಡವಲಾಯಿತು.
ಈಗ ಮತ್ತೆ ಆ ದೇವಾಲಯವನ್ನು ನಿರ್ಮಿಸಲು ಹಾಗೂ ಭಕ್ತರಿಗೆ ದೇವಾಲಯವನ್ನು ನೋಡಲು ಅವಕಾಶ ಮಾಡಿಕೊಡಲು ಗುಲ್ಜಾರ್ ಅಹ್ಮದ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಲ್ಲದೆ ಈ ಘಟನೆಯಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೇ ದೇವಾಲಯ ಪುನರ್ ನಿರ್ಮಾಣಕ್ಕಾಗಿ ದಾಳಿಕೋರರಿಂದ ಹಣ ಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.