ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಅರ್ಜಿದಾರರ ಪರ ವಕೀಲ ಶತಬೀಶ್ ಶಿವಣ್ಣ – Saaksha Tv
ಬೆಂಗಳೂರು: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಅರ್ಜಿದಾರರ ಪರ ವಕೀಲ ಶತಬೀಶ್ ಶಿವಣ್ಣ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯವು ಸರ್ಕಾರದ ಆದೇಶ ಸರಿ ಇದೆ ಎಂದಿದೆ. ನಮ್ಮ ರಿಟ್ ಜೊತೆ ಬೇರೆ ಎಲ್ಲ ರಿಟ್ ಅರ್ಜಿಗಳು ವಜಾ ಆಗಿವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಬೇಕಾ, ಬೇಡ್ವಾ ಅಂತ ವಿಚಾರ ಮಾಡಿ ನೋಡುತ್ತೇವೆ ಎಂದರು.
ಈಗಲೇ ಏನೂ ಹೇಳಲು ಆಗುವುದಿಲ್ಲ. ಸತತ 11 ದಿನ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಿದೆ. ಆದೇಶದ ಪ್ರತಿ ಬರಬೇಕು. ಈ ಪ್ರತಿ ಸಿಕ್ಕ ಬಳಿಕ ಅದರಲ್ಲಿರುವ ಅಂಶಗಳನ್ನು ನೋಡಿ ಮುಂದೆ ಯಾವ ರೀತಿ ಕಾನೂನು ಹೋರಾಟ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.