WHO ಮಹಾನಿರ್ದೇಶಕ ಡಾ ಟೆಡ್ರೊಸ್ ಘೆಬ್ರೆಯೆಸಸ್ ಅವರಿಗೆ “ ತುಳಸಿ ಬಾಯ್” ಎಂದು ಹೆಸರಿಟ್ಟ ಪ್ರಧಾನಿ…
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ ಟೆಡ್ರೊಸ್ ಘೆಬ್ರೆಯೆಸಸ್ ಅವರಿಗೆ ಕೋರಿಕೆಯ ಮೆರೆಗೆ ಪ್ರಧಾನಿ ನರೇಂದ್ರ ಮೋದಿ `ತುಳಸಿ-ಭಾಯ್’. ಎಂದು ಹೊಸದಾಗಿ ನಾಮಕರಣ ಮಾಡಿದ್ದಾರೆ.
ಗುಜರಾತಿನಲ್ಲಿ ನಡಯುತ್ತಿರುವ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ “ತುಳಸಿ ಸಸ್ಯ (`ಪವಿತ್ರ ತುಳಸಿ’ ಅಥವಾ ಓಸಿಮಮ್ ಟೆನ್ಯುಫ್ಲೋರಮ್) ಭಾರತದ ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ” ಎಂದು ಹೇಳಿದರು.
ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡ ಡಾ ಘೆಬ್ರೆಯೆಸಸ್ ಅವರು ಗುಜರಾತಿನಲ್ಲಿಒ ಮಾತನಾಡಲು ಯತ್ನಿಸಿದರು. .
ಡಾ ಘೆಬ್ರೆಯೆಸಸ್ ಗುಜರಾತಿ ಹೆಸರನ್ನು ಬಯಸಿದ್ದರು ಎಂದು ಮೋದಿ ಹೇಳಿದರು. “ಇವತ್ತು ಬೆಳಿಗ್ಗೆ ನನ್ನನ್ನು ಭೇಟಿಯಾದಾಗ ಅವರು “ಪಕ್ಕಾ ಗುಜರಾತಿಯಾಗಿದ್ದೇನೆ” ಎಂದು ಹೇಳಿದರು. ನನಗೆ ಗುಜರಾತಿನ ಹೆಸರನ್ನು ನೀಡುವಂತೆ ಕೇಳಿದರು. ವೇದಿಕೆಯ ಮೇಲೆ ಹೆಸರನ್ನು ನಿರ್ಧರಿಸಿದ್ದೀರಾ ? ಎಂದು ನನಗೆ ನೆನಪಿಸಿದರು. ಮಹಾತ್ಮಾ ಗಾಂಧಿಯವರ ಈ ಪುಣ್ಯಭೂಮಿಯಲ್ಲಿ ಒಬ್ಬ ಗುಜರಾತಿಯಾಗಿ, ನಾನು ನನ್ನ ಆತ್ಮೀಯ ಸ್ನೇಹಿತನನ್ನು `ತುಳಸಿಭಾಯ್’ ಎಂದು ಕರೆಯುತ್ತೇನೆ,” ಎಂದು ಪ್ರಧಾನಿ ಹೇಳಿದರು.
ಪವಿತ್ರ ತುಳಸಿಯನ್ನು ಸಾಂಪ್ರದಾಯಿಕವಾಗಿ ಭಾರತದ ಪ್ರತಿಯೊಂದು ಮನೆಯಲ್ಲೂ ನೆಡಲಾಗುತ್ತದೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ ಎಂದು ಮೋದಿ ಹೇಳಿದರು.
“ತುಳಸಿ ಭಾರತದ ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಸಸ್ಯವಾಗಿದೆ” ಎಂದು ಪ್ರಧಾನಿ ಹೇಳಿದರು, ದೀಪಾವಳಿಯ ಸಮಯದಲ್ಲಿ ತುಳಸಿ ವಿವಾಹ ಹಬ್ಬವೂ ಇದೆ ಎಂದು ಹೇಳಿದರು. ಗುಜರಾತಿಗೆ `ಭಾಯ್’ ಪ್ರತ್ಯಯ ಅತ್ಯಗತ್ಯ ಎಂದು ಮೋದಿ ಹೇಳಿದರು.