ಅನವಶ್ಯಕವಾಗಿ ಓಡಾಡದಂತೆ ತೆಡೆಯುತ್ತಿರುವ ಪೊಲೀಸರು
ಹಾಸನ : ಕೊರೊನಾ ಪ್ರಕರಣಗಳು ಏರಿಕೆ ಹಿನ್ನಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲಿದ್ದು, ಇಂದು ಬೆಳಿಗ್ಗೆಯಿಂದಲೇ ಖಾಕಿ ಪಡೆ ನಗರಕ್ಕೆ ಪ್ರವೇಶ ಪಡೆಯುವ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿ ಅನವಶ್ಯಕವಾಗಿ ಓಡಾದಂತೆ ಸೂಚನೆ ನೀಡುತ್ತಿದ್ದಾರೆ. ವಾಹನಗಳನ್ನು ತಡೆದು ಯಾವ ಕಾರಣಕ್ಕೆ ಓಡಾಡುತ್ತಿದ್ದಿರಿ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅಲ್ಲದೇ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳನ್ನು ತೆಡೆದು ವಾಪಸ್ ಕಳುಹಿಸುತ್ತಿದ್ದಾರೆ. ಸದ್ಯ ಪಾಸಿಟಿವಿಟಿ ರೇಟ್ 1.70 ಇದ್ದು, ಇದು ಏರಿಕೆಯಾಗದಂತೆ ತಡೆಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.