ಮಹಿಳೆಯನ್ನು ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ರೈಲ್ವೇ ಪೊಲೀಸ್..!
ಉತ್ತರ ಪ್ರದೇಶ: ರೈಲ್ವೇ ನಿಲ್ದಾಣದಲ್ಲಿ ಅನೇಕರ ನಿರ್ಲಕ್ಷ್ಯ, ಆಕಸ್ಮಿಕವಾಗಿ ಬೀಳುವುದು, ಹುಚ್ಚು ಸಾಹಸ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇಂತಹ ಹಲವರ ಜೀವಗಳನ್ನ ರೈಲ್ವೇ ರಕ್ಷಣಾ ಸಿಬ್ಬಂದಿಗಳು ಉಳಿಸಿರುವುದು ಗೊತ್ತಿದೆ. ಆದ್ರೆ ಉತ್ತರಪ್ರದೇಶದಲ್ಲಿ ರೈಲಿನಡಿ ಸಿಲುಕಬೇಕಿದ್ದ ಮಹಿಳೆಯ ಪ್ರಾಣ ಉಳಿಸಲು ಹೋಗಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂ ನಿಂದ ಹೊಸ ಫೀಚರ್ ಲಾಂಚ್ : 4 ಲೈವ್ ರೂಮ್ ಫೀಚರ್ ನ ವಿಶೇಷತೆಗಳೇನು..!
ಹಳಿ ದಾಟುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋದ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಕೊಖರಾಜ್ ಪ್ರದೇಶದ ಭಾರ್ವರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಿರ್ಮಲಾ ದೇವಿ ಎಂಬಾಕೆ ಹಳಿ ದಾಟುತ್ತಿದ್ದ ವೇಳೆ ರೈಲು ಬರುತ್ತಿರುವದನ್ನು ಗಮಿನಿಸಿದ ಹೆಡ್ ಕಾನ್ ಸ್ಟೆಬಲ್ ಗ್ಯಾನ್ ಚಂದ್ ಅವರು ಮಹಿಳೆಯನ್ನು ರಕ್ಷಿಸಲು ಹೋಗಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆ ಸಹ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.