`ರಾಮ್ ಚರಣ್’ ಜೊತೆ `ಪ್ರಶಾಂತ್ ನೀಲ್’ ಸಿನಿಮಾ
ಟಾಲಿವುಡ್ ನ ಮೆಗಾಪವರ್ ಸ್ಟಾರ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಲೈನ್ ನಲ್ಲಿ ಇಡುತ್ತಿದ್ದಾರೆ.
ಸದ್ಯ ‘ಆರ್ ಆರ್ ಆರ್’ ಚಿತ್ರವನ್ನು ಮುಗಿಸಿರುವ ಚೆರ್ರಿ, ಇತ್ತೀಚೆಗೆ ಶಂಕರ್ ನಿರ್ದೇಶನದಲ್ಲಿ ಚಿತ್ರವನ್ನು ಆರಂಭಿಸಿದ್ದರು. ಇದೀಗ ದಸರಾ ಪ್ರಯುಕ್ತ ಗೌತಮ್ ತಿನ್ನನೂರಿ ಜೊತೆ ಸಿನಿಮಾ ಮಾಡೋದಾಗಿ ಘೋಷಿಸಿದ್ದಾರೆ.
ಸದ್ಯ ಒಂದು ಸಿನಿಮಾವನ್ನು ಮುಗಿಸಿ ಎರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಚರಣ್ ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲು ಸೈ ಎಂದಿದ್ದಾರಂತೆ.
ಅಲ್ಲದೆ ಈ ಬಗ್ಗೆ ಮಾತನಾಡಲು ಚಿರಂಜೀವಿ ಅವರ ಆಹ್ವಾನದ ಮೇರೆಗೆ ನಿರ್ಮಾಪಕ ಡಿವಿವಿ ದಾನಯ್ಯ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿರಂಜೀವಿ ಮನೆಗೆ ಭೇಟಿ ನೀಡಿ ರಾತ್ರಿಯ ಡಿನ್ನರ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಆರ್ ಸಿ 17 ಸಿನಿಮಾವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ.
ರಾಮ್ ಚರಣ್ ಜೊತೆ ‘ವಿನಯ ವಿಧೇಯ ರಾಮ’ ಮತ್ತು ‘ಆರ್ ಆರ್ ಆರ್’ ಸಿನಿಮಾಗಳನ್ನು ನಿರ್ಮಿಸಿದ ಡಿವಿವಿ ದಾನಯ್ಯ ಈ ಕ್ರೇಜಿ ಕಾಂಬಿನೇಷನ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ.
ಸದ್ಯ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡುತ್ತಿದ್ದಾರೆ. ಇದಾದ ಬಳಿಕ ಎನ್ ಟಿಆರ್ ಜೊತೆ ಅಥವಾ ರಾಮ್ ಚರಣ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ.