ಇಂದು ಕನ್ನಡ ಚಿತ್ರರಂಗಕ್ಕೆ “ಕರಾಳ ಶುಕ್ರವಾರ”. ಅಪ್ಪು ಅಭಿಮಾನಿಗಳ ಸಂಭ್ರಮ ಕಮರಿಹೋಗಿದೆ. ಸಂಜೆ 6 ಗಂಟೆ ನಂತರ ಕಂಠೀರವ ಸ್ಟೇಡಿಯಮ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತನಿಂದ ನಿಧನರಾಗಿದ್ದಾರೆ. ಅಪ್ಪು ಅವರು 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಮೂಲಕ ಕನ್ನಡ ಚಿತ್ರರಂಗವನ್ನ ಕಣ್ಣೀರಿನಲ್ಲಿ ದೂಡಿದ್ದಾರೆ. ಕನ್ನಡ ಚಿತ್ರರಂಗವನ್ನ ಪುನೀತಗೊಳಿಸಿದವ ಇನ್ನಿಲ್ಲದಂತಾಗಿದ್ದಾರೆ. ಬೆಟ್ಟದ ಹೂ ಬಾಡಿ ಹೊಗಿದೆ. ಕನ್ನಡ ಚಿತ್ರರಂಗದ ಬಾಗ್ಯವಂತ ಕಣ್ಮರೆಯಾಗಿದ್ದಾರೆ.
ಕನ್ನಡ ಚಿತ್ರರಂಗದ ಅರಸು ಕಣ್ಮರೆಯಾದ ಕಹಿ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಭಿಮಾನಿಗಳ ಪಾಲಿನ ಪರಮಾತ್ಮನನ್ನ ಕಳೆದುಕೊಂಡ ದುಃಖ ಹೇಳಲಾಗ್ತಿಲ್ಲ. ಅಣ್ಣ ನ ಚಿತ್ರ ಭಜರಂಗಿ ಬಿಡುಗಡೆ ದಿನವೇ ನಡೆದ ದುರ್ಘಟನೆ ಸಹಿಸಿಕೊಳ್ಳಲಾಗದೇ ಕಣ್ಣೀರಲ್ಲಿ ಮುಳುಗಿದೆ ಸ್ಯಾಂಡಲ್ ವುಡ್. ಜವರಾಯನ ಚಕ್ರವ್ಯೂಹದಲ್ಲಿ ಸಿಲುಕಿದ ಪುನೀತ್ , ಅಭಿಮಾನಿಗಳನ್ನ ಅನಾಥ ಮಾಡಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.
ಆಸ್ಪತ್ರೆ ಹೊರಗೆ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅಳುತ್ತಾ ಸಂಕಟ ಪಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದು ಕರಾಳ ದಿನವಾಗಿದೆ. ಹೃದಯಾಘಾತದಿಂದ ವಿಕ್ರಮ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದ ಅಪ್ಪು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ಅಂತ ಗೊತ್ತಾಗ್ತಿದ್ದಂತೆ ಅಭಿಮಾನಿಗಳು ಆಸ್ಪತ್ರೆಯ ಬಳಿ ದೌಡಾಯಿಸಿ ಬಂದಿದ್ದರು. ದೇವರ ಬಳಿ ಪವಾಡಕ್ಕಾಗಿ ಬೇಡಿಕೊಳ್ತಿದ್ರೂ. ಆದ್ರೂ ಪವಾಡ ನಡೆಯಲಿಲ್ಲ..
ಸಿನಿಮಾರಂಗದ ನಟ ನಟಿಯರು , ರಾಜಕಾರಣಿಗಳು , ಸಿಎಂ ಬೊಮ್ಮಾಯಿ , ಅಪ್ಪು ಕುಟುಂಬ , ಶಿವಣ್ಣ , ದರ್ಶನ್ , ಯಶ್ , ಹೀಗೆ ಚಂದನವನದ ದಂಡೇ ಹರಿದು ಬಂದಿತ್ತು. ಶ್ರುತಿ ಅವರು , ಜಿಮ್ ರವಿ ಅವರು ಬಿಕ್ಕಿ ಬಿಕ್ಕಿ ಅತ್ರೆ, ಉಳಿದವರು ತೀರಾ ಭಾವುಕರಾಗಿದ್ರು..
ತಂದೆಯಂತೆ ಪುನೀತ್ ನೇತ್ರದಾನ : ಸಾವಿನಲ್ಲೂ ಸಾರ್ಥಕತೆ